ಹಣಕಾಸಿನ ವ್ಯವಹಾರದ ವಿಚಾರ: ವ್ಯಕ್ತಿಯ ಕೊಲೆಗೆ ಯತ್ನ
ಕುಂದಾಪುರ, ಅ.29: ಹಣಕಾಸಿನ ವ್ಯವಹಾರದ ವಿಚಾರದಲ್ಲಿ ವೈಮನಸ್ಸಿ ನಿಂದ ವ್ಯಕ್ತಿಯೊಬ್ಬರ ಕೊಲೆಗೆ ಯತ್ನಿಸಿರುವ ಘಟನೆ ಕಾಳಾವರ ಗ್ರಾಮದ ಸೆಳ್ವಾಡಿ ಗರಗದ್ದೆ ಎಂಬಲ್ಲಿ ಅ.28ರಂದು ರಾತ್ರಿ ವೇಳೆ ನಡೆದಿದೆ.
ಕಾಳಾವರ ಅಭಿಮಾನ್ ಬಾರ್ ಹೋಟೆಲಿನ ಬಳಿಯ ನವನಗರ ನಿವಾಸಿ ನಿಸ್ಸಾರ್(34) ಎಂಬಾತ ಹಣಕಾಸಿನ ವ್ಯವಹಾರದ ವಿಚಾರದಲ್ಲಿ ವೈಮನಸ್ಸಿ ನಿಂದ ಕೊಲೆ ಮಾಡುವ ಉದ್ದೇಶದಿಂದ ಬೀಯರ್ ಬಾಟ್ಲಿಯಲ್ಲಿ ಗರಗದ್ದೆಯ ಲವಕರ(35) ಎಂಬವರ ಮುಖ, ಹಣೆ, ಕಿವಿ, ತಲೆಗೆ ಹೊಡೆದು ಗಾಯಗೊಳಿ ಸಿರುವ ಬಗ್ಗೆ ದೂರಲಾಗಿದೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story