44 ವರ್ಷದಿಂದ ವಾರ್ಡ್ನ ಜನರ ಸೇವೆಯಲ್ಲಿ ನಿರತ: ಬಿ. ವಿಶ್ವನಾಥ್
ಮಂಗಳೂರು, ನ. 2: ಜಾತಿ, ಮತ, ಪಕ್ಷ, ಸಂಕುಚಿತ ಭಾವನೆಗಳನ್ನು ಮೀರಿ ನಿಸ್ವಾರ್ಥ ಭಾವದಿಂದ ಕಳೆದ 44 ವರ್ಷಗಳಿಂದ ವಾರ್ಡ್ನಲ್ಲಿ ಜನಪರ ಸೇವೆಯನ್ನು ನಡೆಸುತ್ತಿದ್ದು, ಈ ಬಾರಿ ಪಕ್ಷೇತರನಾಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು ಮತದಾರರು ತನ್ನನ್ನು ಗೆಲ್ಲಿಸಬೇಕು ಎಂದು ಕಂಕನಾಡಿ 49ನೇ ವಾರ್ಡ್ ಪಕ್ಷೇತರ ಅಭ್ಯಥಿರ್ ಬಿ. ವಿಶ್ವನಾಥ್ ಮನವಿ ಮಾಡಿದ್ದಾರೆ.
‘‘ನಾನು ಬಿ.ಎ. ಪದವೀಧರನಾಗಿದ್ದು, ಈ ಹಿಂದೆ ಎರಡು ಬಾರಿ ಕಂಕನಾಡಿ ವಾರ್ಡ್ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಗೊಂಡು ಕಾರ್ಪೋರೇಟರ್ ಆಗಿ ಕಾರ್ಯನಿರ್ವಹಿಸಿದ್ದೇನೆ. ಅವಿವಾಹಿತನಾದ ನಾನು ನನ್ನ ವಾರ್ಡ್ ಅಲ್ಲದೆ, ಸುತ್ತಲಿನ ವಾರ್ಡ್ನ ಜನರ ಕಷ್ಟ ಸುಖಗಳಿಗೆ ಸ್ಪಂದಿಸಿದ್ದೇನೆ. ಹಲವಾರು ಮಂದಿ ಅರ್ಹರಿಗೆ ಸರಕಾರದ ಸವಲತ್ತುಗಳನ್ನು ದೊರಕಿಸಿಕೊಡಲು ನೆರವಾಗಿದ್ದೇವೆ. ಪಿಂಚಣಿ, ಸಂಧ್ಯಾ ಸುರಕ್ಷಾಘಿ ಸಹಿತ ಸರಕಾರದ ನೆರವು, ಸವಲತ್ತು ಪಡೆಯಲು, ಯೋಜನೆಗಳನ್ನು ತಲುಪಿಸಲು ಕೆಲಸ ಮಾಡಿದ್ದೇನೆ ’’ ಎಂದು ಸುದ್ದಿಗೋಷ್ಠಿಯಲ್ಲಿಂದು ಅವರು ಹೇಳಿದರು.
‘‘ಉಚಿತ ಪುಸ್ತಕ ವಿತರಣೆ, ವಿದ್ಯಾರ್ಥಿ ವೇತನ, ವೈದ್ಯಕೀಯ ಶಿಬಿರ, ಪ್ರವಾಸ, ಸಾರ್ವಜನಿಕ ಗಣೇಶೋತ್ಸವ, ಸೇವಾದಳ ವಾರ್ಷಿಕೋತ್ಸವ ನಡೆಸುತ್ತಿದ್ದೇನೆ. ಅಧಿಕಾರವಧಿಯಲ್ಲಿ ರಸ್ತೆ, ಆರೋಗ್ಯ ಕೇಂದ್ರ, ಗ್ರಂಥಾಲಯ, ಆಟದ ಮೈದಾನ, ಚರಂಡಿ, ವಿದ್ಯುತ್, ಕುಡಿಯುವ ನೀರು ಸೌಲಭ್ಯ, ಸ್ಮಶಾನ, ಅಂಚೆ ಕಚೇರಿ, ಬ್ಯಾಂಕ್ ಸೌಲಭ್ಯ ಒದಗಿಸಲು ಶ್ರಮಿಸಿದ್ದೇನೆ ಎಂದರು.
ರತ್ನಾಕರ ರಾವ್, ಅಬ್ದುಲ್ ಸತ್ತಾರ್, ಸಮೀರ್ ಕೆ. ಪಕಲಡ್ಕ, ಗಂಗಾಧರ ಉಪಸ್ಥಿತರಿದ್ದರು