ಮಾತಾ ಅಮೃತನಂದಮಯಿಯ 66ನೆ ಅವತರಣೋತ್ಸವ
ಮಂಗಳೂರು, ನ.3: ಬೋಳೂರಿನ ಮಾತಾ ಅಮೃತಾನಂದಮಯಿ ಮಠದ ವತಿಯಿಂದ ಸದ್ಗುರು ಮಾತಾ ಅಮೃತಾನಂದಮಯಿ ದೇವಿಯ 66ನೇ ಅವತರಣೋತ್ಸವವನ್ನು ರವಿವಾರ ಆಚರಿಸಲಾಯಿತು.
ಮಠದ ಮುಖ್ಯಸ್ಥೆ ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯ ಸಾರಥ್ಯದಲ್ಲಿ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಗುರುಪಾದುಕಾ ಪೂಜೆ ಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು.
ಆಶೀರ್ವಚನ ನೀಡಿದ ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯ, ಜೀವನದಲ್ಲಿ ಭಕ್ತಿ ಶ್ರದ್ಧೆ ಅವಶ್ಯಕತೆಗಳ ಕುರಿತು ಹೇಳಿದರು. ಮಠದ ಸಮಾಜ ಮುಖಿ ಸೇವಾ ಯೋಜನೆಗಳಾದ ಅಮೃತ ಸ್ಕಾಲರ್ಶಿಪ್, ವಸ್ತ್ರದಾನ ಮತ್ತು ಆಯುಷ್ಕಿಟ್ಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾ ಯಿತು. ಅಮೃತ ವಿದ್ಯಾಲಯಕ್ಕೆ ಪ್ರದಾನ ಮಾಡಲಾದ ಐಎಸ್ಒ ಪ್ರಮಾಣ ಪತ್ರವನ್ನು ಮುಖ್ಯಅತಿಥಿ ಇಂದಿರಾ ವರ್ಮ ಅವರು ಶಾಲಾ ಮುಖ್ಯಸ್ಥೆ ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯರಿಗೆ ಹಸ್ತಾಂತರಿಸಿದರು.
ಮುಖ್ಯ ಅತಿಥಿಯಾಗಿ ವಿ.ಎಲ್.ರೇಗೋ, ಮಾತಾ ಅಮೃತಾನಂದಮಯಿ ಸೇವಾಸಮಿತಿ ಪೂರ್ವಾಧ್ಯಕ್ಷ ಡಾ.ಜೀವರಾಜ್ ಸೊರಕೆ, ಡಾ.ವೈ. ಸನತ್ ಹೆಗ್ಡೆ, ಸಿ.ಎ.ವಾಮನ್ ಕಾಮತ್, ಶ್ರುತಿ ಹೆಗ್ಡೆ ಉಪಸ್ಥಿತರಿದ್ದರು. ಅಧ್ಯಕ್ಷ ಡಾ.ವಸಂತ ಕುಮಾರ್ ಪೆರ್ಲ ಸ್ವಾಗತಿಸಿದರು. ಡಾ.ಅಶೋಕ್ ಶೆಣೈ ಮತ್ತು ಡಾ.ದೇವದಾಸ್ ಪುತ್ರನ್ ಕಾರ್ಯಕ್ರಮ ನಿರೂಪಿಸಿದರು. ಡಾ.ಮೀನಾಕ್ಷಿ ರಾಮಚಂದ್ರ ವಂದಿಸಿದರು.
ಸನ್ಮಾನ: ಸ್ವಚ್ಚ, ಸುಂದರ ಹಾಗೂ ಆರೋಗ್ಯಪೂರ್ಣ ಭಾರತ ನಿರ್ಮಾಣದ ಕುರಿತು ಅಮ್ಮನವರ ಮಹತ್ವಾಕಾಂಕ್ಷಿ ಯೋಜನೆ ಅಮಲ ಭಾರತ ಅಭಿಯಾನದೊಂದಿಗೆ ಕೈಜೋಡಿಸಿದ 6 ಸಂಸ್ಥೆಗಳ ಮುಖ್ಯಸ್ಥರನ್ನು ಸನ್ಮಾನಿಸಲಾಯಿತು. ಮಂಗಳೂರು ವಿವಿ ಕಾಲೇಜಿನ ಪ್ರಾಧ್ಯಾಪಕಿ ಪ್ರೊ.ವಿನೀತಾ ರೈ, ಕೊಣಾಜೆ ಗ್ರಾಪಂ ಅಧ್ಯಕ್ಷ ನಝರ್ ಶಾ ಪಟ್ಟೋರಿ, ಕರ್ನಾಟಕ ಮೀಸಲು ಪಡೆ 7ನೇ ಬೆಟಾಲಿಯನ್ ಅಸಿಸ್ಟೆಂಟ್ ಕಮಾಂಡೆಂಟ್ ಶರತ್, ಹಳೆಯಂಗಡಿ ಶ್ರೀವಿದ್ಯಾವಿನಾಯಕ ಯುವಕ ಮಂಡಲದ ಅಧ್ಯಕ್ಷ ಸುಧಾಕರ ಅಮೀನ್, ಯುವತಿ ಮತ್ತು ಮಹಿಳಾ ಮಂಡಲದ ಅಧ್ಯಕ್ಷೆ ದಿವ್ಯಶ್ರೀ ರಮೇಶ್ ಕೋಟ್ಯಾನ್, ವಿದ್ಯಾವಿನಾಯಕ ರಜತ ಸೇವಾ ಟ್ರಸ್ಟ್ ಪದಾಧಿಕಾರಿ ಸ್ಟ್ಯಾನಿ ಡಿ ಕೋಸ್ತಾ ಅವರನ್ನು ಸನ್ಮಾನಿಸಲಾಯಿತು. 9ನೇ ವರ್ಷದ ಅಮಲ ಭಾರತಂ ಅಭಿಯಾನದ ಸ್ಮರಣಿಕೆ ಬಿಡುಗಡೆ ಗೊಳಿಸಲಾಯಿತು.