ಗೆದ್ದರೆ ಗೌರವಧನವೂ ಸಮಾಜ ಸೇವೆಗೆ ಮೀಸಲು: ಪಕ್ಷೇತರ ಅಭ್ಯರ್ಥಿ ಮುಹಮ್ಮದ್ ಬಶೀರ್ ಘೋಷಣೆ
ಮಂಗಳೂರು, ನ. 6: ನ.12ರಂದು ನಡೆಯುವ ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ಯಲ್ಲಿ ಅತ್ತಾವರ 55ವಾರ್ಡ್ ನಿಂದ ಪಕ್ಷೇತರರಾಗಿ ಸ್ಪರ್ಧಿಸುತ್ತಿರುವ ಸಮಾಜ ಸೇವಕ, ಉದ್ಯಮಿ ಮುಹಮ್ಮದ್ ಬಶೀರ್ ತಾನು ಚುನಾವಣೆ ಯಲ್ಲಿ ಜಯಗಳಿಸಿದರೆ ಮಹಾನಗರ ಪಾಲಿಕೆಯ ವತಿಯಿಂದ ತನಗೆ ದೊರೆಯುವ ಗೌರವಧನವನ್ನು ವಾರ್ಡ್ ನ ಬಡವರ ಸೇವಾ ಕಾರ್ಯಗಳಿಗೆ ನೀಡುವುದಾಗಿ ಸುದ್ದಿ ಗೋಷ್ಠಿಯಲ್ಲಿಂದು ಘೋಷಣೆ ಮಾಡಿದ್ದಾರೆ.
ಜೆಪ್ಪುವಿನ ಪ್ರದೇಶದಲ್ಲಿ ಕಳೆದ 26ವ ರ್ಷಗಳಿಂದ ನಿವಾಸಿಯಾಗಿದ್ದು ಮಹಾನಗರ ಪಾಲಿಕೆಯ ಜನರ ಸಮಸ್ಯೆ ಗಳ ಬಗ್ಗೆ ಅರಿವಿದೆ. ಈ ಹಿನ್ನೆಲೆ ಯಲ್ಲಿ ಈಗಾಗಲೇ ಸಮಾಜ ಸೇವಾಚಟುವಟಿಕೆಯಲ್ಲಿ ತೊಡಗಿಕೊಂಡಿರುವ ತಾನು ಇನ್ನಷ್ಟು ಜನ ಸೇವೆ ಮಾಡಲು ತನ್ನನ್ನು ಈ ಬಾರಿಯ ಚುನಾವಣೆಯಲ್ಲಿ ಆಯ್ಕೆ ಮಾಡಬೇಕು ಎಂದು ಮನವಿ ಮಾಡುವುದಾಗಿ ತಿಳಿಸಿದ್ದಾರೆ.
ಮಂಗಳೂರಿನ ಶಕ್ತಿ ನಗರದ ಶ್ರೀ ಗಣೇಶ ಸೇವಾ ಟ್ರಸ್ಟ್ ನ ಟ್ರಸ್ಟಿಯಾಗಿ ಅದರ ಸೇವಾಯೋಜನೆಯಾಗಿರುವ ಸಾನಿಧ್ಯ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿ ಶಾಲೆ ಹಾಗೂ ಉಜಿರೆಯ ಎಂಡೋಸಲ್ಫಾನ್ ಪೀಡಿತ ರ ಸಾನಿಧ್ಯ ಕೌಶಲ್ಯ ಕೇಂದ್ರ ದ ಆಡಳಿತ ಮಂಡಳಿಯ ಸದಸ್ಯನಾಗಿ ಸೇವೆ ಸಲ್ಲಿಸು ತ್ತಿರುವ ಮುಹಮ್ಮದ್ ಬಶೀರ್ ನಗರದ ಬೆಂದೂರ್ ನಲ್ಲಿರುವ ಸೈಂಟ್ ಆ್ಯಗ್ನೆಸ್ ವಿಶೇಷ ಶಾಲೆಯ ರಕ್ಷಕ ಶಿಕ್ಷಕ ಸಂಘದ ಸದಸ್ಯನಾಗಿ ಸೇವೆ ಸಲ್ಲಿಸಿರು ತ್ತಾರೆ. ಜಮ್ಯೀಯತುಲ್ ಮಂಗಳೂರು ನಗರ ಘಟಕದ ಮಾಜಿ ಅಧ್ಯಕ್ಷ ರಾಗಿದ್ದು, ರೆಡ್ ಕ್ರಾಸ್ ಸಂಸ್ಥೆಯ ಅಜೀವ ಸದಸ್ಯ ರಾಗಿದ್ದು, ಐಎಎಸ್, ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ತರಬೇತಿ ನೀಡುವ ಏಸ್ ಫೌಂಡೇಶನ್ ನ ಸ್ಥಾಪಕ ಟ್ರಸ್ಟಿಯಾಗಿ, ಅನಾಥ ಮತ್ತು ನಿರ್ಗತಿಕ ಹೆಣ್ಣು ಮಕ್ಕಳ ಪಾಲನಾ ಕೇಂದ್ರ ಖೈರಿಯಾ ಟ್ರಸ್ಟ್ ನ ಖಜಾಂಜಿಯಾಗಿ, ಹಜ್ಜಾಜ್ ಗಳ ಸೇವಕರಾಗಿ,ಬೋಳಾರ ಬ್ರದ ರ್ಸ್ ಫುಟ್ಬಾಲ್ ತಂಡದ ಮಾಜಿ ಅಧ್ಯಕ್ಷ ರಾಗಿ ಹತ್ತು ಹಲವು ಸಂಘ ಸಂಸ್ಥೆಗಳ ಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದಾಗಿ ಮುಹಮ್ಮದ್ ಬಶೀರ್ ತಿಳಿಸಿದ್ದಾರೆ.
ಮಹಮ್ಮದ್ ಅವರು ಓರ್ವ ನಿಸ್ವಾರ್ಥ ಮನೋಭಾವ ದ ಸಮಾಜ ಸೇವಕರಾಗಿ ಕಾರ್ಯನಿರ್ವಹಿಸುತ್ತಾ ಬಂದಿರುವುದನ್ನು ಗಮನಿಸಿ ಇಂತಹ ಜನನಾಯಕರ ಅಗತ್ಯವಿದೆ ಎಂದು ಅವರನ್ನು ಬೆಂಬಲಿಸುವುದಾಗಿ ಸಾನಿಧ್ಯ ಸಂಸ್ಥೆ ಯ ಆಡಳಿತಾಧಿಕಾರಿ ವಸಂತ ಶೆಟ್ಟಿ, ಬೆಂದೂರು ಚರ್ಚ್ ಆಡಳಿತ ಸಮಿತಿಯ ಉಪಾಧ್ಯಕ್ಷ ಸ್ಟೀಫನ್ ಪಿಂಟೊ, ಬೋಳಾರ ಜುಮ್ಮಾಮಸೀದಿಯ ಖಜಾಂಜಿ ಇಮ್ತಿಯಾಝ್ ,ಜೆಪ್ಪು ನಿವಾಸಿ ಫಯಾಸ್ ಅವರನ್ನು ಬೆಂಬಲಿಸುವುದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.