ಮಂಗಳೂರಿನಲ್ಲಿ ಮೀಲಾದ್ ಜಾಥಾಕ್ಕೆ ಚಾಲನೆ
ಮಂಗಳೂರು, ನ. 7: ಸುನ್ನಿ ಯುವಜನ ಸಂಘದ ಕರ್ನಾಟಕ ರಾಜ್ಯ ಸಮಿತಿಯ ವತಿಯಿಂದ ಪ್ರವಾದಿ ಮುಹಮ್ಮದ್ (ಸ)ರ ಜನ್ಮ ದಿನಾಚರಣೆಯ ಅಂಗವಾಗಿ ನಗರದ ಜ್ಯೋತಿ ವೃತ್ತದಿಂದ ಆರಂಭಗೊಂಡ ಮೀಲಾದ್ ಜಾಥಾಕ್ಕೆ ಸುನ್ನಿ ಕೋ ಆರ್ಡಿನೇಶನ್ ಕಮಿಟಿಯ ಅಧ್ಯಕ್ಷ ಎಸ್ಪಿ ಹಂಝ ಸಖಾಫಿ ಗುರುವಾರ ಅಪರಾಹ್ನ ಚಾಲನೆ ನೀಡಿದರು.
ಈ ಸಂದರ್ಭ ಡಾ. ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ, ಜಿಎಂ ಮುಹಮ್ಮದ್ ಕಾಮಿಲ್ ಸಖಾಫಿ, ಎಂಜಿಎಂ ಅಶ್ರಫ್ ಸಅದಿ ಮಲ್ಲೂರು, ಹಾಫಿಳ್ ಯಾಕೂಬ್ ಸಅದಿ ನಾವೂರು, ಯೂಸುಫ್ ಹಾಜಿ ಉಪ್ಪಳ್ಳಿ, ಎಸ್ಕೆ ಖಾದರ್ಹಾಜಿ ಮುಡಿಪು ಮತ್ತಿತರರು ಪಾಲ್ಗೊಂಡಿದ್ದರು.