ಕೋಟ, ನ.10: ಹಾರ್ದಳ್ಳಿ ಮಂಡಳ್ಳಿ ಗ್ರಾಮದ ಸೌಡ ಗುಡ್ಡೆಮನೆಯ ಭಾರತಿ ಎಂಬವರ ಪತಿ ದಿನೇಶ ಎಂ.ಡಿ.(36) ಎಂಬವರು ಮೂಲಮನೆಯಾದ ತೀರ್ಥಹಳ್ಳಿ ಮೇಗರಳ್ಳಿ ಎಂಬಲ್ಲಿಗೆ ಅ.27ರಂದು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಹೋಗುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.