ಪಂಪ್ ವೆಲ್ : ಮಸ್ಜಿದುತ್ತಖ್ವದಲ್ಲಿ ಮೌಲಿದ್ ಕಾರ್ಯಕ್ರಮ
ಮಂಗಳೂರು : ಪ್ರವಾದಿ ಮುಹಮ್ಮದ್ ಮುಸ್ತಫ (ಸಲ್ಲ.ಅ) ಅವರ ಜನ್ಮ ಮಾಸಾಚರಣೆಯ ಪ್ರಯುಕ್ತ ಮೌಲಿದ್ ಕಾರ್ಯಕ್ರಮವು ಮಸ್ಜಿದುತ್ತಖ್ವ ದಲ್ಲಿ ನಡೆಯಿತು.
ವೈ ಅಬ್ದುಲ್ಲಾ ಕುಂಞಿ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಖಾಝಿ ತಾಜುಲ್ ಫುಕಹಾಅ್ ಬೇಕಲ್ ಉಸ್ತಾದ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಸಮಿತಿಯ ಟ್ರಸ್ಟಿಗಳಾದ ಎಸ್ ಎಮ್ ರಶೀದ್ ಹಾಜಿ, ಬಿ ಎಂ ಮಮ್ತಾಝ್ ಅಲಿ, ವಕೀಲರಾದ ಬಶೀರ್ ಅಹ್ಮದ್, ಮುಹಮ್ಮದ್ ಹಾರಿಸಿ, ಬಿ ಎ ನಝೀರ್, ಪಿ ಸಿ ಹಾಷಿರ್, ಮಹ್ ಮೂದ್ ಹಾಜಿ ಕುದ್ರೋಳಿ, ಖತೀಬ್ ಹಾಫಿಳ್ ಅಬ್ದುರಹ್ಮಾನ್ ಸಖಾಫಿ, ಯೂಸುಫ್ ಸಅದಿ, ಮುಹದ್ದಿನ್ ಇಬ್ರಾಹಿಂ ಮುಸ್ಲಿಯಾರ್ , ಅಶ್ರಪ್ ಕಿನಾರ ಹಾಗೂ ಹಲವು ಉಲಮಾ, ಉಮರಾ ನಾಯಕರುಗಳು ಉಪಸ್ಥಿತರಿದ್ದರು.