ನ.25ರಿಂದ ಕದ್ರಿ ಲಕ್ಷದೀಪೋತ್ಸವ
ಮಂಗಳೂರು, ನ.23: ಶ್ರೀಕ್ಷೇತ್ರ ಕದ್ರಿಯಲ್ಲಿ ನ.25ರಂದು ಲಕ್ಷ ದೀಪೋತ್ಸವದ ಪ್ರಯುಕ್ತ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಸಂಜೆ 5ರಿಂದ ಭಜನಾ ಸಂಕೀರ್ತನಾ ಕಾರ್ಯಕ್ರಮ ಜರಗಲಿದೆ.
ಕುಂಜಾರುಗಿರಿ ಗಿರಿಬಳಗ, ಮದ್ಧರಿ ನಾಮಸಂಕೀರ್ತನಾ ಬಳಗ, ಕಳವಾರು, ‘ಸ್ವರಶ್ರೀ’ (ಮಹಿಳಾ) ಭಜನಾ ಬಳಗ ಸುರತ್ಕಲ್, ಬಾಳ ಹಾಗೂ ವಿಪ್ರ ಭಜನಾ ಸಂಕೀರ್ತನ ಬಳಗ ಇವರಿಂದ ಭಜನಾ ಸಂಕೀರ್ತನ ಕಾರ್ಯಕ್ರಮ ನಡೆಯಲಿದೆ.
ಈ ಸಂದರ್ಭ ಕದ್ರಿ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಎ.ಜೆ. ಶೆಟ್ಟಿ ಹಾಗೂ ಇತರ ಪ್ರಮುಖ ಗಣ್ಯರು, ಶ್ರೀಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ವಿಠಲದಾಸ ತಂತ್ರಿ, ಅರ್ಚಕರಾದ ಕದ್ರಿ ರಾಮಣ್ಣ ಅಡಿಗ, ಡಾ.ಪ್ರಭಾಕರ ಅಡಿಗ, ವಾಸುದೇವ ಅಡಿಗ, ರಾಘವೇಂದ್ರ ಅಡಿಗ ಮತ್ತಿತರರು ಉಪಸ್ಥಿತರಿರುವರು ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story