ಬ್ರಿಲಿಯಂಟ್ ಪ.ಪೂರ್ವ ಕಾಲೇಜು : 'ಮಕ್ಕಳ ವಿದ್ಯಾಭ್ಯಾಸದಲ್ಲಿ ಹೆತ್ತವರ ಮತ್ತು ಶಿಕ್ಷಕರ ಪಾತ್ರ' ಕಾರ್ಯಾಗಾರ
ಮಂಗಳೂರು : ಬ್ರಿಲಿಯಂಟ್ ಪದವಿ ಪೂರ್ವ ಕಾಲೇಜು ರಕ್ಷಕ ಶಿಕ್ಷಕ ಸಂಘದ ವಾರ್ಷಿಕ ಸಭೆಯು ಕಾಲೇಜಿನ ಸಭಾಂಗಣದಲ್ಲಿ ಇತ್ತೀಚಿಗೆ ನಡೆಯಿತು.
ವಿದ್ಯಾರ್ಥಿಗಳ ಹೆತ್ತವರಿಗಾಗಿ “ ಮಕ್ಕಳ ವಿದ್ಯಾಭ್ಯಾಸದ ಬೆಳವಣಿಗೆಯಲ್ಲಿ ಹೆತ್ತವರ ಮತ್ತು ಶಿಕ್ಷಕರ ಪಾತ್ರ” ದ ಬಗ್ಗೆ ವಿಚಾರ ಸಂಕೀರ್ಣವನ್ನು ಸಂಪನ್ಮೂಲ ವ್ಯಕ್ತಿ ಡಾ. ಮೀರಾ ಕೃಷ್ಣಪ್ಪ ಮ್ಯಾನೇಜಿಂಗ್ ಡೈರೆಕ್ಟರ್ SHEETAL (Solution for Holistic Educational Excellence, Training & Active Learning ) ಅವರ ಮಾರ್ಗದರ್ಶನದಲ್ಲಿ ನಡೆಸಲಾಯಿತು.
ಈ ಸಂದರ್ಭ ಮಾತನಾಡಿದ ಅವರು, ಹೆತ್ತವರು ಮಕ್ಕಳನ್ನು ಹರೆಯದಲ್ಲಿ ಗೆಳೆಯನಂತೆ ನೋಡಿಕೊಂಡು ಮಾರ್ಗದರ್ಶಕ ರಾಗಬೇಕು. ಮುಕ್ತ ಮಾತುಕತೆ, ಪರಿಸ್ಥಿಯ ಅರಿವು ಸಾಂದರ್ಭಿಕ ಸನ್ನಿವೇಶಗಳನ್ನು ನಿಭಾಯಿಸುವ ಬಗ್ಗೆ ನಿದರ್ಶನದೊಂದಿಗೆ ತಿಳಿ ಹೇಳಿದಾಗ ಮಾತ್ರ ಮಕ್ಕಳಲ್ಲಿ ಸಹಜವಾಗಿ ದೂರದ ಅಲೋಚನೆಗಳು ಬಂದು ಎಲ್ಲವನ್ನೂ ನಿರ್ಭಯದಿಂದ ನಿರ್ವಹಿಸಲು ಅರ್ಹರಾಗುತ್ತಾರೆ´ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಬಿಂದುಸಾರ ಶೆಟ್ಟಿ ಕಾಲೇಜಿನ ನಿಯಮಾವಳಿಗಳ ಬಗ್ಗೆ ಪೋಷಕರಿಗೆ ಮನವರಿಕೆ ಮಾಡುತ್ತಾ, “ವಿದ್ಯಾರ್ಥಿಗಳ ಸರ್ವೋತ್ತಮ ಬೆಳವಣಿಗೆಯಲ್ಲಿ ಹೆತ್ತವರ ಮತ್ತು ಶಿಕ್ಷಕರ ಪಾತ್ರ ಬಹುಮುಖ್ಯವಾಗಿದ್ದು, ಅದನ್ನು ಹೆತ್ತವರು ಮತ್ತು ಶಿಕ್ಷಕರು ಅರಿತು ಒಂದೇ ದಿಶೆಯಲ್ಲಿ ಮಾರ್ಗದರ್ಶಕರಾಗಿ ವಿದ್ಯಾರ್ಥಿಗಳಿಗೆ ಸಹಕರಿಸಬೇಕು. ಹೆತ್ತವರ ಸಂಪೂರ್ಣ ಸಹಕಾರ ವಿದ್ದಲ್ಲಿ ಮಾತ್ರ ಶಿಕ್ಷಕರಿಗೆ ವಿದ್ಯಾರ್ಥಿಗಳಲ್ಲ್ಲಿ ಶಿಸ್ತುಬದ್ದ ವಿದ್ಯಾರ್ಜನೆಯ ಅರಿವು ಮೂಡಿಸಲು ಸಾಧ್ಯ” ಎಂದರು.
ಬ್ರಿಲಿಯಂಟ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಸಿ.ಎ. ರಾಮ ಮೋಹನ ರೈ ಮಾತನಾಡಿ, “ಹೆತ್ತವರು ತಮ್ಮ ಕರ್ತವ್ಯವನ್ನು ನಿಭಾಯಿಸುವಾಗ ವಿದ್ಯಾರ್ಥಿಗಳು ಸಹ ಹೆತ್ತವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಓದಿನ ಬಗ್ಗೆ ಹೆಚ್ಚು ಗಮನವಿರಿಸಿ ಉತ್ತಮ ಅಂಕಗಳೊಂದಿಗೆ ಸತತವಾಗಿ ತೇರ್ಗಡೆಯಾಗಬೇಕು, ಅಲ್ಲದೆ ಪ್ರತಿಹಂತದಲ್ಲಿ ಶಿಕ್ಷಕರು ಮತ್ತು ರಕ್ಷಕರು ವಿದ್ಯಾರ್ಥಿಗಳ ಜೊತೆ ಮುಕ್ತ ಸಂವಾದದ ವಾತಾವರಣ ಸೃಷ್ಟಿ ಮಾಡಿ ವಿದ್ಯಾರ್ಥಿಗಳ ಪ್ರತಿಭೆಗೆ ಪೂರಕ ಮಾರ್ಗದರ್ಶನ ನೀಡಬೇಕು” ಎಂದು ಸಲಹೆ ನೀಡಿದರು.
ಇನ್ನೋರ್ವ ಮುಖ್ಯ ಅತಿಥಿ ಡಾ. ಕೃತಿಶ್ರೀ, ಮನಶಾಸ್ತ್ರಜ್ಞೆ ಕೆ.ಎಂ.ಸಿ. ಮಂಗಳೂರು, ಇವರು ಮಾತನಾಡಿ, ಹದಿಹರೆಯದ ಮಕ್ಕಳಲ್ಲಿ ಮನೋ ವಿಕಾಸತೆಯನ್ನು ಗಮನಿಸಿ ಅದಕ್ಕೆ ತಕ್ಕ ಹಾಗೆ ಪರಿಸ್ಥಿತೆಯನ್ನು ಅರ್ಥೈಸಿ ಪೂರಕ ವಾತವರಣವನ್ನು ಕಲ್ಪಿಸುವುದು ತಂದೆ ತಾಯಿ ಹಾಗು ಶಿಕ್ಷಕರ ಆಧ್ಯ ಕರ್ತವ್ಯವಾಗಿದೆ. ಖಿನ್ನತೆಯಿಂದ ಬಳಲುವ ವಿದ್ಯಾರ್ಥಿಗಳಿಗೆ ಸೂಕ್ತ ಹಂತ ದಲ್ಲಿಯೇ ವೈದ್ಯಕೀಯ ಚಿಕಿತ್ಸೆ ನೀಡಬೇಕು. ದೈಹಿಕ ಆರೋಗ್ಯದಷ್ಟೇ ಪ್ರಾಮುಖ್ಯತೆಯನ್ನು ಮಾನಸಿಕ ಆರೋಗ್ಯಕ್ಕೂ ನೀಡಬೇಕು ಎಂದರು.
ಕಾರ್ಯಕ್ರಮವನ್ನು ವಾಣಿಜ್ಯ ಉಪನ್ಯಾಸಕಿ ಐಶ್ವರ್ಯ ನಿರೂಪಿಸಿದರು. ಇಂಗ್ಲಿಷ್ ಉಪನ್ಯಾಸಕಿ ಅಶ್ವಿನಿ ಸ್ವಾಗತಿಸಿದರು, ರಸಾಯನಶಾಸ್ತ್ರ ಉಪನ್ಯಾಸಕಿ ಅನುಷಾ ವಂದಿಸಿದರು ಮತ್ತು ಗಣಿತ ಉಪನ್ಯಾಸಕಿ ಕಾರ್ಯಕ್ರಮ ನಿರ್ವಹಿಸಿದರು. ಪಿಟಿಎ ಕಾರ್ಯದರ್ಶಿ ಭವಾನಿ ರೈ ಉಪಸ್ತಿತರಿದ್ದರು.