ಕಾರ್ಕಳ, ನ.29: ಮದ್ಯಪಾನ ಚಟದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಸಾಣೂರು ಗ್ರಾಮದ ಕುಂಟಲ್ಪಾಡಿ ದೂಪದ ಬ್ಯಾಕ್ಯಾರಿನ ಸುರೇಶ್ ದೇವಾಡಿಗ (47) ಎಂಬವರು ತನ್ನ ಮನೆ ಸಮೀಪ ಹೊಸ ಮನೆ ಕಟ್ಟಲು ಹಾಕಿದ ಪಂಚಾಂಗದ ಬಳಿ ವಿಷ ಪದಾರ್ಥ ಸೇವಿಸಿ ಮೃತಪಟ್ಟಿದ್ದಾರೆ ಎನ್ನಲಾದ ಘಟನೆ ನಡೆದಿದೆ.
ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.