ಪ್ರತ್ಯೇಕ ಪ್ರಕರಣ: ಮೂವರ ಆತ್ಮಹತ್ಯೆ
ಉಡುಪಿ, ನ.30: ಆರ್ಥಿಕ ಅಡಚಣೆ ಹಾಗೂ ಮದ್ಯ ಸೇವನೆಯ ಚಟದಿಂದ ಮಾನಸಿಕವಾಗಿ ನೊಂದ ಹೋಂ ನರ್ಸ್ ಕೆಲಸ ಮಾಡಿಕೊಂಡಿದ್ದ ಬಾಗಲ ಕೋಟೆ ಮೂಲದ ಶಿವರಾಜ ವಡ್ಡರ(22) ಎಂಬವರು ನ.29ರಂದು ರಾತ್ರಿ ವೇಳೆ ತಾನು ವಾಸವಾಗಿರುವ ಬಾಡಿಗೆ ಮನೆಯ ಶೌಚಾಲಯದ ಮಾಡಿನ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಾವರ: ವಿಪರೀತ ಶರಾಬು ಕುಡಿಯುವ ಚಟ ಹೊಂದಿದ್ದ ಕೊಕ್ಕರ್ಣೆ ಸೂರಾಲುಜೆಡ್ಡುವಿನ ತಿಮ್ಮ ಮರಕಾಲ(50) ಎಂಬವರು ವೈಯಕ್ತಿಕ ಕಾರಣ ದಿಂದ ಮನನೊಂದು ನ.29ರಂದು ರಾತ್ರಿ ವೇಳೆ ಮನೆಯ ಕೋಣೆಯ ಮರದ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಟ: ಎದೆ ಉರಿ ಹಾಗೂ ಹೊಟ್ಟೆನೋವಿನಿಂದ ಬಳಲುತ್ತಿದ್ದ ಕೋಟತಟ್ಟು ಗ್ರಾಮದ ಕಲ್ಮಾಡಿ ರಸ್ತೆಯ ನಿವಾಸಿ ಸೋಮ ಬತ್ತಡ (60) ಎಂಬವರು ನ.29 ರಂದು ಮಧ್ಯಾಹ್ನ ವೇಳೆ ಸಮೀಪದಲ್ಲೇ ಇರುವ ತನ್ನ ತಂಗಿ ಮನೆಯ ತೆಂಗಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.