'ಸಮುದಾಯದ ಒಗ್ಗೂಡುವಿಕೆಯಿಂದ ನಿಯಂತ್ರಣ ಸಾಧ್ಯ'
‘ವಿಶ್ವ ಏಡ್ಸ್ ದಿನ-2019’ ಮರಳು ಶಿಲ್ಪ
ಉಡುಪಿ, ನ.30: ವಿಶ್ವ ಏಡ್ಸ್ ದಿನ-2019 ಇದರ ಅಂಗವಾಗಿ ಮಣಿಪಾಲ್ ಸ್ಯಾಂಡ್ಹಾರ್ಟ್ನ ಕಲಾವಿದರಾದ ಶ್ರೀನಾಥ್ ಮಣಿಪಾಲ್, ವೆಂಕಿ ಪಲಿಮಾರು ಮತ್ತು ರವಿ ಹಿರೆಬೆಟ್ಟು ಇವರು ಮಣಿಪಾಲದಲ್ಲಿ ಏಡ್ಸ್ ಬಗ್ಗೆ ಜಾಗೃತಿ ಮೂಡಿಸುವ ಮರಳುಶಿಲ್ಪ ರಚಿಸಿದ್ದಾರೆ.
ಸಮುದಾಯದ ಒಗ್ಗೂಡುವಿಕೆಯಿಂದ ಈ ಮಾರಕ ಕಾಯಿಲೆಯನ್ನು ನಿಯಂತ್ರಿಸಬಹುದು ಎನ್ನುವ ಈ ವರ್ಷದ ಘೋಷವಾಕ್ಯವನ್ನು ಈ ಕಲಾಕೃತಿಯ ಜೊತೆ ಬಿಂಬಿಸಲಾಗಿದೆ.
ಈ ಕಲಾಕೃತಿಯು ಡಿಸೆಂಬರ್ 2ರವರೆಗೆ ಪ್ರದರ್ಶನದಲ್ಲಿರುತ್ತದೆ ಎಂದು ಕಲಾವಿದರು ತಿಳಿಸಿದ್ದಾರೆ.
Next Story