ಮದ್ರಸ ಮ್ಯಾನೇಜ್ಮೆಂಟ್ ಸುರತ್ಕಲ್ ರೇಂಜ್ ಅಧ್ಯಕ್ಷರಾಗಿ ಎ.ಕೆ. ಅಬ್ದುಲ್ ಖಾದರ್
ಸುರತ್ಕಲ್, ಡಿ.3: ಮದ್ರಸ ಮ್ಯಾನೇಜ್ಮೆಂಟ್ ಸುರತ್ಕಲ್ ರೇಂಜ್ ಇದರ 2019-22ನೇ ಸಾಲಿನ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಮುಲ್ಕಿ ಶಾಫಿ ಜುಮಾ ಮಸೀದಿಯಲ್ಲಿ ನಡೆಯಿತು.
ಸಭೆಯಲ್ಲಿ ಕಳೆದ ವರ್ಷದ ಲೆಕ್ಕಪತ್ರವನ್ನು ಇಮ್ತಿಯಝ್ ಮಂಡಿಸಿದರು. ಕಳೆದ ಸಾಲಿನ ಅಧ್ಯಕ್ಷ ಇಕ್ಬಾಲ್ ಅಹ್ಮದ್ ವರದಿ ಮಂಡಿಸಿದರು. ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರಫೀಕ್ ಹಾಜಿ ಕೊಡಾಜೆ ವಹಿಸಿದ್ದರು. ಈ ಸಭೆಯನ್ನು ಎಸ್.ಬಿ.ದಾರಿಮಿ ಉದ್ಘಾಟಿಸಿದರು. ಮುಂದಿನ ಸಾಲಿನ ಪದಾಧಿಕಾರಿಗಳ ಆಯ್ಕೆಯ ಚುನಾವಣಾ ವೀಕ್ಷಕರಾಗಿ ಹಕೀಂ ಪರ್ತಿಪಾಡಿ, ಗೌರವ ಉಪಸ್ಥಿತರಾಗಿ ಜಮೀಯ್ಯತುಲ್ ಮುಲ್ಲಿಂನ ಅಧ್ಯಕ್ಷ ಅಬ್ದುಲ್ಲಾ ದಾರಿಮಿ ಭಾಗವಹಿಸಿದ್ದರು.
ನೂತನ ಸಮಿತಿ ರಚನೆ: ಸಭೆಯಲ್ಲಿ ಮುಂದಿನ ಅವಧಿಗೆ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಎ.ಕೆ.ಅಬ್ದುಲ್ ಖಾದರ್, ಪ್ರಧಾನ ಕಾರ್ಯದರ್ಶಿ ಎಸ್.ಎಂ.ಹನ್ೀ ಇಡ್ಯಾ, ಕೋಶಾಧಿಕಾರಿಯಾಗಿ ಐ.ಮೊಯ್ದೀನಬ್ಬ ಹಾಜಿ, ಉಪಾಧ್ಯಕ್ಷರಾಗಿ ಬಿ.ಎಂ.ಲಿಯಾಕತ್ ಅಲಿ ಮುಲ್ಕಿ, ಕೆ.ಎಂ.ಇಲ್ಯಾಸ್ ಸೂರಿಂಜೆ, ಕಾರ್ಯದರ್ಶಿಯಾಗಿ ಸಾಹುಲ್ ಹಮೀದ್ ಕದಿಕೆ, ನವಾಝ್ ಚೊಕ್ಕಬೆಟ್ಟು, ಪತ್ರಿಕಾ ಕಾರ್ಯದರ್ಶಿಯಾಗಿ ಇಬ್ರಾಹೀಂ ಕಾರ್ನಾಡ್, ಸಂಘಟನಾ ಕಾರ್ಯದರ್ಶಿ ಝೈನುದ್ದೀನ್ ಬೊಳ್ಳೂರು, ಜಿಲ್ಲಾ ಸದಸ್ಯರಾಗಿ ಎಂ.ಎಸ್.ಅಹ್ಮದ್ ಬಾವ ಹಾಗೂ ಐ.ಬಿ.ಇಮ್ತಿಯಾಝ್ ಅಹ್ಮದ್ರನ್ನು ಆಯ್ಕೆ ಮಾಡಿ 23 ಸದಸ್ಯರನ್ನು ಒಳಗೊಂಡ ನೂತನ ಸಮಿತಿಯನ್ನು ರಚಿಸಲಾಯಿತು.
ಸಭೆಯಲ್ಲಿ ಅಹ್ಮದ್ ಬಾವ ಚೊಕ್ಕಬೆಟ್ಟು, ಇಬ್ರಾಹೀಂ ಬೊಳ್ಳೂರು ಹಾಗೂ ಜಮೀಯ್ಯತುಲ್ ಮುಅಲ್ಲಿಂನ ಎಲ್ಲ ಕಾರ್ಯಕಾರಿ ಸಮಿತಿಯವರು ಉಪಸ್ಥಿತರಿದ್ದರು. ಜಮೀಯ್ಯತುಲ್ ಮುಅಲ್ಲಿಂನ ಪ್ರಧಾನ ಕಾರ್ಯಕಾರಿ ಹನೀಫ್ ದಾರಿಮಿ ಸ್ವಾಗತಿಸಿ, ದುವಾಗೈದರು.