ಕರಂಬಳ್ಳಿ: ಡಾ.ಬ್ನಂಜೆ ಪ್ರವಚನ ಸಪ್ತಾಹ ಆರಂಭ
ಉಡುಪಿ, ಡಿ.9: ಕರಂಬಳ್ಳಿ ಶ್ರೀವೆಂಕಟರಮಣ ದೇವಸ್ಥಾನ ಮತ್ತು ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿಯ ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿರುವ ವಿದ್ಯಾವಾಚಸ್ಪತಿ ಡಾ.ಬನ್ನಂಜೆ ಗೋವಿಂದಾಚಾರ್ಯರ ಮಹಾಭಾರತದಲ್ಲಿ ದ್ರೌಪದಿ ಪಾತ್ರ ಚಿಂತನೆಯ ಪ್ರವಚನ ಸಪ್ತಾಹ ರವಿವಾರ ಪ್ರಾರಂಭಗೊಂಡಿತು.
ದೇವಳದ ಆಡಳಿತ ಮೊಕ್ತೇಸರರಾದ ಶಾಸಕ ಕೆ.ರಘುಪತಿ ಭಟ್ ಮತ್ತು ಪಾಡಿಗಾರು ವಾಸುದೇವ ತಂತ್ರಿ ದೀಪ ಬೆಳಗಿಸಿ ಉದ್ಘಾಟಿಸಿದರು. ವಲಯ ಬ್ರಾಹ್ಮಣ ಸಮಿತಿ ಅಧ್ಯಕ್ಷ ಎಂ.ಶ್ರೀನಿವಾಸ ಬಲ್ಲಾಳ್, ಕಾರ್ಯದರ್ಶಿ ನಾಗರಾಜ ಭಟ್, ಕೋಶಾಧಿಕಾರಿ ಶ್ರೀಪತಿ ಭಟ್, ರಂಗನಾಥ ಸಾಮಗ ಮೊದಲಾದವರು ಉಪಸ್ಥಿತರಿದ್ದರು. ಪಿ.ವಾಸುದೇವ ಭಟ್ ಸ್ವಾಗತಿಸಿದರು.
Next Story