ಮಹಾಲಕ್ಷ್ಮೀ ಉಚ್ಚಿಲ ತಂಡಕ್ಕೆ ಪಡುಬಿದ್ರಿ ಕರಾವಳಿ ಕಬಡ್ಡಿ ಪ್ರಶಸ್ತಿ
ಪಡುಬಿದ್ರಿ: ಪಡುಬಿದ್ರಿ ಕರಾವಳಿ ಮೊಗವೀರ ಯುವ ಸಂಘಟನೆಯ ಆಶ್ರಯದಲ್ಲಿ ಪಡುಬಿದ್ರಿ ಬೀಚ್ನಲ್ಲಿ ರವಿವಾರ ರಾತ್ರಿ ನಡೆದ ಅವಿಭಜಿತ ದಕ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಪುರುಷರ ಮ್ಯಾಟ್ ಕಬಡ್ಡಿ ಪಂದ್ಯಾಟದಲ್ಲಿ ಮಹಾಲಕ್ಷ್ಮೀ ಉಚ್ಚಿಲ ತಂಡವು ಪ್ರಶಸ್ತಿ ಪಡೆಯಿತು.
ಫೈನಲ್ನಲ್ಲಿ ಪಡುಬಿದ್ರಿಯ 7 ರಾಕರ್ಸ್ ಆಪತ್ಬಾಂಧವ ತಂಡವನ್ನು ರೋಮಾಂಚಕಾರಿಯಾಗಿ ಸೋಲಿಸಿ ಮಹಾಲಕ್ಷ್ಮೀ ತಂಡವು ಪ್ರಶಸ್ತಿ ಜತೆಗೆ ನಗದು ರೂ 30,000 ಪಡೆಯಿತು.
ಪಡುಬಿದ್ರಿಯ 7 ರಾಕರ್ಸ್ ಆಪತ್ಬಾಂಧವ ತಂಡವು ದ್ವಿತೀಯ ಪ್ರಶಸ್ತಿ ಸಹಿತ ನಗದು ರೂ.20,000 ಪಡೆಯಿತು. ಬಗಂಬಿಲ ತತ್ವಮಸಿ ತಂಡವು ತೃತೀಯ ಪ್ರಶಸ್ತಿಯೊಂದಿಗೆ ನಗದು ರೂ.10,000, ಹಾಗೂ ಬಂಟ್ವಾಳ ಭದ್ರ ಚಾಲೆಂಜರ್ಸ್ ತಂಡವು ಚತುರ್ಥ ಪ್ರಶಸ್ತಿಯೊಂದಿಗೆ ನಗದು ರೂ.5,000 ಪಡೆಯಿತು. ಮಹಾಲಕ್ಷ್ಮೀ ತಂಡದ ವಿಶ್ವರಾಜ್ ಉತ್ತಮ ಸವ್ಯಸಾಚಿ, ಅದೇ ತಂಡದ ಕಲಂದರ್ ಉತ್ತಮ ಹಿಡಿತಗಾರ ಮತ್ತು 7 ರಾಕರ್ಸ್ ತಂಡದ ಪ್ರತಾಪ್ ಉತ್ತಮ ದಾಳಿಗಾರ ವೈಯಕ್ತಿಕ ಪ್ರಶಸ್ತಿ ಪಡೆದರು.
ಅವಿಭಜಿತ ದ.ಕ. ಜಿಲ್ಲೆಯ ಬಲಿಷ್ಠ 22 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದು, ಉಡುಪಿ ಸಾಯಿರಾಧಾ ಗ್ರೂಪ್ಸ್ ನ ಸಿಎಮ್ಡಿ ಮನೋಹರ ಶೆಟ್ಟಿ ಮತ್ತು ಪಡುಬಿದ್ರಿ ಬೀಡು ಅರಸರಾದ ರತ್ನಾಕರರಾಜ್ ಅರಸು ಕಿನ್ಯಕ್ಕ ಬಲ್ಲಾಳರು ಪಂದ್ಯಾಟವನ್ನು ಉದ್ಘಾಟಿಸಿದ್ದರು.
ಸಾಧು ಸಾಲ್ಯಾನ್ ಮಲ್ಪೆ, ಬೆಂಗಳೂರು ಉದ್ಯಮಿ ತಿಲಕ್ ಸಾಲ್ಯಾನ್ ಕಾಡಿಪಟ್ಣ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನೀತಾ ಗುರುರಾಜ್, ಜಿಲ್ಲಾ ಪಂಚಾಯಿತಿ ಸದಸ್ಯ ಶಶಿಕಾಂತ್ ಪಡುಬಿದ್ರಿ, ಪಡುಬಿದ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಮಯಂತಿ ವಿ. ಅಮೀನ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ನವೀನ್ಚಂದ್ರ ಜೆ.ಶೆಟ್ಟಿ, ಸುಕುಮಾರ್ ಶ್ರೀಯಾನ್, ಲೀಲಾಧರ್ ಸಾಲ್ಯಾನ್, ವಿಶ್ವನಾಥ ಕರ್ಕೇರ, ಅಶೋಕ್ ಸಾಲ್ಯಾನ್, ಸೇವಂತಿ ಸದಾಶಿವ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಪ್ರಶಸ್ತಿ ವಿತರಣೆ: ಸೋಮವಾರ ಮುಂಜಾನೆ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಪಡುಬಿದ್ರಿ ಕರಾವಳಿ ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ವಿಜೇತ್ ಸಾಲ್ಯಾನ್, ಉದ್ಯಮಿ ಶೇಖರ್ ಸಾಲ್ಯಾನ್ ನಡಿಪಟ್ಣ, ವಿಶ್ವಾಸ್ ವಿ.ಅಮೀನ್, ಕೃಷ್ಣ ಕಾಂಚನ್, ಸಾಗರ್ ಕರ್ಕೇರ, ವಿಜೇಶ್ ಕೋಟ್ಯಾನ್, ಹರೀಶ್ ಪುತ್ರನ್ ಮತ್ತಿತರ ಗಣ್ಯರು ವಿಜೇತರಿಗೆ ಪ್ರಶಸ್ತಿ ವಿತರಿಸಿದರು.