ಮಂಗಳೂರು ನಗರದಲ್ಲಿ ಕರ್ಫ್ಯೂ ಹೇರುವ ಅಗತ್ಯವಿರಲಿಲ್ಲ -ಪಿ.ಬಿ.ಡೇಸಾ
ಮಂಗಳೂರು, ಡಿ.21:ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದಲ್ಲಿ ಈ ಬಾರಿ ಕರ್ಫ್ಯೂ ಹೇರುವ ಅಗತ್ಯವಿರಲಿಲ್ಲ. ಇದರಿಂದ ಸಾಕಷ್ಟು ತೊಂದರೆ ಆಗಿದೆ. ಜನರಿಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಪ್ರತಿಭಟನೆ ಮಾಡುವ ಹಕ್ಕಿದೆ. ಅದನ್ನು ಕಸಿದುಕೊಳ್ಳುವ ರೀತಿಯಲ್ಲಿ ಪೊಲೀಸ್ ಇಲಾಖೆ ವರ್ತಿಸುವುದು ಸರಿಯಲ್ಲ .ಇದೊಂದು ಪೂರ್ವಯೋಜಿತ ಕೃತ್ಯದಂತೆ ಕಂಡು ಬರುತ್ತದೆ .ಪ್ರತಿಭಟನೆ ನಡೆಸಿದ ಸಂದರ್ಭ ಗುಂಡುಹಾರಿಸಿ ಇಬ್ಬರು ಮೃತ ಪಟ್ಟ ಘಟನೆಯನ್ನು ತೀವೃವಾಗಿ ಖಂಡಿಸುತ್ತೆನೆ. ಈ ಬಗ್ಗೆ ನಿಷ್ಪಕ್ಷಪಾತವಾದ ತನಿಖೆಯಾಗಬೇಕು ಎಂದು ಪಿಯುಸಿಎಲ್ ರಾಷ್ಟ್ರೀಯ ಉಪಾಧ್ಯಕ್ಷ ಪಿ. ಬಿಡೇಸಾ ಆಗ್ರಹಿಸಿದ್ದಾರೆ.
Next Story