ಆಯುಷ್ಮಾನ್, ಕಾರ್ಮಿಕ್ ಮಾನ್ಧನ್ ನೋಂದಣಿ ಶಿಬಿರ
ಉಡುಪಿ, ಫೆ.10: ಜಿಲ್ಲಾ ನೇಕಾರರ ಪ್ರಕೋಷ್ಠ, ಪದ್ಮಶಾಲಿ ವಿಶ್ವ ಸೇವಾ ಪ್ರತಿಷ್ಠಾನ, ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ, ಪದ್ಮಶಾಲಿ ತರುಣ ವೃಂದ ಕಿನ್ನಿಮೂಲ್ಕಿ ಶಾರದೋತ್ಸವ ಸಮಿತಿ, ರೋಟರಿ ಕ್ಲಬ್ ಉಡುಪಿ ರಾಯಲ್, ಜೇಸಿಐ ಹಿಲ್ಸಿಟಿ ಮಣಿಪಾಲ, ಜಿಲ್ಲಾ ಕಾರ್ಮಿಕ ಇಲಾಖೆ, ಕೇಂದ್ರ ಅಸಂಘಟಿತ ಕಾರ್ಮಿಕ ಕಲ್ಯಾಣ ಇಲಾಖೆ, ಜಿಲ್ಲಾ ಅರೋಗ್ಯ ಇಲಾಖೆ, ಉಡುಪಿ ನಗರ ಪ್ರಾಥಮಿಕ ಅರೋಗ್ಯ ಇಲಾಖೆ, ಕೋಯಲ್ ಮತ್ತು ಚತುರ್ಥಿ ಸರ್ವಿಸ್ ಸೆಂಟರ್ಗಳ ಸಂಯುಕ್ತ ಆಶ್ರಯದಲ್ಲಿ ಆಯುಷ್ಮಾನ್ ಆರೋಗ್ಯ ಕರ್ನಾಟಕ, ಕಾರ್ಮಿಕ ಮಾನ್ಧನ್ ಹಾಗೂ ಇನ್ನಿತರ ಸರಕಾರಿ ಯೋಜನೆಗಳ ನೋಂದಣಿ ಮತ್ತು ಮಾಹಿತಿ ಕಾರ್ಯಗಾರವನ್ನು ರವಿವಾರ ಉಡುಪಿ ಕಿನ್ನಿಮೂಲ್ಕಿ ವೀರಭದ್ರ ದೇವಸ್ಥಾ ಸಭಾಂಗಣದಲ್ಲಿ ಆಯೋಜಿಸ ಲಾಗಿತ್ತು.
ಕಾರ್ಯಕ್ರಮವನ್ನು ಕಿನ್ನಿಮುಲ್ಕಿ ಶ್ರೀವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಭಾಚಂದ್ರ ಪದ್ಮಶಾಲಿ ಉದ್ಘಾಟಿಸಿದರು. ಜಿಲ್ಲಾ ನೇಕಾರರ ಪ್ರಕೋಷ್ಠದ ಅಧ್ಯಕ್ಷ ರತ್ನಾಕರ್ ಇಂದ್ರಾಳಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ನಗರಸಭಾ ಸದಸ್ಯ ಪ್ರಭಾಕರ್ ಪೂಜಾರಿ ಮಾತನಾಡಿದರು.
ವಿವಿಧ ಸಂಘಟನೆಗಳ ಪ್ರಮುಖರಾದ ಎಂ.ಜಯರಾಮ್ ಮಂಗಳೂರು, ಸದಾನಂದ ಶೆಟ್ಟಿಗಾರ್, ಓಂಪ್ರಕಾಶ್ ಡಿ.ಶೆಟ್ಟಿಗಾರ್, ಶಿವಪ್ರಸಾದ್ ಶೆಟ್ಟಿಗಾರ್, ವಿದ್ಯಾ ಚರಣ್ ಶೆಟ್ಟಿಗಾರ್, ಜಿಲ್ಲಾ ವಕ್ಫ್ ಸಲಹಾ ಸಮಿತ ಅಧ್ಯಕ್ಷ ದಾವೂದ್ ಅಬೂಬಕರ್, ನಗರಸಭಾ ಸದಸ್ಯರಾದ ರಶ್ಮಿ ಭಟ್, ಬಾಲಕೃಷ್ಣ ಶೆಟ್ಟಿ, ನಗರ ಪ್ರಾಥಮಿಕ ಆರೋಗ್ಯಾಧಿಕಾರಿ ಡಾ.ಹೇಮಂತ್, ಬೀದಿ ಕಾರ್ಮಿಕರ ಕಲ್ಯಾಣ ಇಲಾಖೆಯ ವೈದ್ಯಾಧಿಕಾರಿ ಅಕ್ಷತಾ ನಾಯಕ್, ಜಿಲ್ಲಾ ಅರೋಗ್ಯ ನಿರೀಕ್ಷಕ ಜೀವನ್ ಕುಮಾರ್, ಯೋಗ ಶಿಕ್ಷಕಿ ವುಮತಾ ಶೆಟ್ಟಿಗಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಯೋಜಕ ಮಂಜುನಾಥ್ ಮಣಿಪಾಲ ಸ್ವಾಗತಿಸಿದರು. ನಾಗರಾಜ್ ಕಿನ್ನಿಮೂಲ್ಕಿ ಕಾರ್ಯಕ್ರಮ ನಿರೂಪಿಸಿದರು. ಯಶವಂತ್ ಬಿ.ಕೆ. ವಂದಿಸಿದರು.