ಕೋವಿಡ್19: ರೋಗಿಗಳ ಮನೆ ಬಾಗಿಲಿಗೆ ಆಮ್ಲಜನಕ ಸಿಲಿಂಡರ್ ತಲುಪಿಸಲಿದೆ ಅಂಜುಮನ್-ಎ-ಇಸ್ಲಾಂ
ಬೆಳಗಾವಿ, ಜು.30: ಕೋವಿಡ್-19 ವಿರುದ್ಧ ಹೋರಾಟದಲ್ಲಿ ಸಕ್ರಿಯವಾಗಿರುವ ಅಂಜುಮನ್-ಎ-ಇಸ್ಲಾಂ ಸಮಿತಿಯು, ಕೃತಕ ಆಮ್ಲಜನಕ ಸಿಲಿಂಡರ್ಗಳನ್ನು ಸಂಗ್ರಹಿಸಿ, ರೋಗಿಗಳ ಮನೆಬಾಗಿಲಿಗೆ ತಲುಪಿಸುವ ಮಹತ್ವದ ಕಾಯಕಕ್ಕೆ ಕೈಹಾಕಿದೆ.
ಕೊರೋನ ಸೋಂಕು ದೃಢಪಟ್ಟ ಬಳಿಕ ಅತಿ ಗಂಭೀರವಲ್ಲದ ರೋಗಿಗಳು ಮನೆಗಳಲ್ಲಿ ಆರೈಕೆಯಲ್ಲಿದ್ದು, ಹಾಗೂ ಇನ್ನಿತರೆ ಆರೋಗ್ಯ ಸಂಬಂಧಿ ಸಮಸ್ಯೆಯಿಂದ ಉಸಿರಾಟದ ತೊಂದರೆ ಕಾಣಿಸಿಕೊಂಡವರಿಗೆ ಈ ಸಿಲಿಂಡರ್ಗಳನ್ನು ಉಚಿತವಾಗಿ ನೀಡಲು ಸಮಿತಿ ಮುಂದಾಗಿದೆ.
ಈಗಾಗಲೇ 120 ಆಕ್ಸಿಜನ್ ಸಿಲಿಂಡರ್ಗಳನ್ನು ಖರೀದಿಸಿ ಸಂಗ್ರಹಿಸಿದ್ದು, ರೋಗಿಗಳ ಮನೆ ಬಾಗಿಲಿಗೆ ಸಮಿತಿಯಿಂದಲೇ ವಾಹನದ ವ್ಯವಸ್ಥೆ ಮಾಡಿ ಸಿಲಿಂಡರ್ ಅನ್ನು ತಲುಪಿಸಲಾಗುವುದು. ಅದನ್ನು ಬಳಸುವ ವಿಧಾನವನ್ನೂ ಕೂಡ ತಿಳಿಸಿಕೊಡಲು ಉದ್ದೇಶಿಸಲಾಗಿದೆ. ಇದಕ್ಕಾಗಿ ವೈದ್ಯರ ತಂಡವನ್ನು ಕೂಡ ರಚಿಸಲಾಗಿದೆ ಎನ್ನುತ್ತಾರೆ ಸಮಿತಿಯ ಸದಸ್ಯರು.
ಸಂಪರ್ಕಿಸಿ: ಈ ಸೇವಾ ಕಾರ್ಯ ಮುಸ್ಲಿಮರಿಗೆ ಮಾತ್ರ ಸೀಮಿತವಾಗಿಲ್ಲ. ಎಲ್ಲ ಜಾತಿ, ಧರ್ಮದವರಿಗೂ ಒದಗಿಸಲಾಗುವುದು. ಇದರಿಂದ ಬಿವ್ಸ್ ಕೋವಿಡ್ ಆಸ್ಪತ್ರೆ ಮೇಲಿನ ಅವಲಂಬನೆ ಕಡಿಮೆಯಾಗಲಿ ಎನ್ನುವ ಆಶಯವೂ ನಮ್ಮದಾಗಿದೆ. ತುರ್ತು ಅಗತ್ಯವಿದ್ದವರು ಆ ಸಂಖ್ಯೆಗಳನ್ನು ಸಂಪರ್ಕಿಸಿ ನೆರವು ಪಡೆಯಬಹುದು. ನನಗೂ (ಮೊ:9844053866) ಕರೆ ಮಾಡಬಹುದು ಎಂದು ಸಮಿತಿಯ ಅಧ್ಯಕ್ಷ ರಾಜು ಸೇಠ್ ನುಡಿದರು.
ಸ್ವಯಂಸೇವಕರು ಹಾಗೂ 8 ಮಂದಿ ವೈದ್ಯರ ತಂಡವನ್ನು ರಚಿಸಿದ್ದು, ಅವರಲ್ಲಿ ಯಾರಾದರೊಬ್ಬರು ರೋಗಿಗೆ ನೆರವಾಗುತ್ತಾರೆ. ಮೊಬೈಲ್ ಪ್ರೋ ವಿಡಿಯೊ ಕಾಲ್ ಮಾಡಿ ತಕ್ಷಣ ಸ್ಪಂದಿಸುತ್ತಾರೆ. ಅವರು ರೆಪರ್ ಮಾಡುವವರಿಗೆ ಸಮಿತಿಯಿಂದ ಆಕ್ಸಿಜನ್ ಸಿಲಿಂಡರ್ ಕಳುಹಿಸಲಾಗುವುದು. ಅದನ್ನು ಅಳವಡಿಸುವುದು ಹಾಗೂ ಬಳಸುವ ಕುರಿತು ವೈದ್ಯರು ತಿಳಿಸಿಕೊಡುತ್ತಾರೆ.
-ರಾಜು ಸೇಠ್, ಅಧ್ಯಕ್ಷ, ಅಂಜುಮನ್-ಎ-ಇಸ್ಲಾಂ ಸಮಿತಿ