ಮಂಗಳೂರು: ಕಾಲಿನ ಕಲೆ ತೆಗೆಸುವುದಾಗಿ ಲಕ್ಷಾಂತರ ರೂ. ವಂಚನೆ
ಮಂಗಳೂರು, ಡಿ.10: ಕಾಲಿನಲ್ಲಿರುವ ಕಲೆಯನ್ನು ತೆಗೆಸುವುದಾಗಿ ಹೇಳಿ ಉರ್ವಸ್ಟೋರ್ನ ಆಯುರ್ವೇದ ಔಷಧ ಮಳಿಗೆಗೆ ಸಂಬಂಧಿಸಿದ ಸಿಬ್ಬಂದಿ ಎನ್ನಲಾದ ವ್ಯಕ್ತಿಯೋರ್ವ ಸುಮಾರು ಲಕ್ಷಾಂತರ ರೂ. ನಗದು ಪಡೆದು ವಂಚನೆ ಮಾಡಿರುವುದಾಗಿ ಬಂದರು ಠಾಣೆಯಲ್ಲಿ ದೂರು ದಾಖಲಾಗಿದೆ.
ಡಿ.7ರಂದು ತನ್ನ ಬಳಿಗೆ ಬಂದ ಶರತ್ ಎಂಬವರು ಕಾಲಿನ ಕಲೆಯನ್ನು ನೋಡಿ ಉರ್ವಸ್ಟೋರ್ ಚಿಲಿಂಬಿಯಲ್ಲಿರುವ ಆಯುರ್ವೇದಿಕ್ ಮಳಿಗೆಗೆ ಕರೆದುಕೊಂಡು ಹೋಗಿ ಅಲ್ಲಿ 45,700 ರೂ. ಪಡೆದುಕೊಂಡಿದ್ದಾರೆ. ಬಳಿಕ ಇನ್ನೂ ಹೆಚ್ಚಿನ ಮೊತ್ತಕ್ಕೆ ಒತ್ತಾಯಿಸಿದ್ದಾನೆ. ತಮ್ಮ ಉಳಿತಾಯ ಖಾತೆಯಿಂದ ನಗದು 4.50 ಲಕ್ಷ ರೂ. ನೀಡಿದ್ದು, ಜತೆಗೆ 4 ಲಕ್ಷ ರೂ. ಮೌಲ್ಯದ ಎರಡು ಚೆಕ್, 2 ಲಕ್ಷ ರೂ. ಮೌಲ್ಯದ ಒಂದು ಚೆಕ್ ಪಡೆದು ಕೊಂಡಿದ್ದ. ಡಿ.8ರಿಂದ ಕರೆ ಮಾಡಿದರೆ ಆತ ಕರೆ ಸ್ವೀಕರಿದೆ ಮೋಸ ಮಾಡಿದ್ದಾನೆ ಎಂದು ವ್ಯಕ್ತಿಯೊಬ್ಬರು ದೂರಿನಲ್ಲಿ ತಿಳಿಸಿದ್ದಾರೆ.
Next Story