ದ.ಕ. ಜಿಲ್ಲೆಯಲ್ಲಿ ಪಾರದರ್ಶಕ ಗ್ರಾ.ಪಂ. ಚುನಾವಣೆಗೆ ಚುನಾವಣಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳಲಿ : ರಮಾನಾಥ ರೈ
ಮಂಗಳೂರು : ಮುಂದಿನ ಪಂಚಾಯತ್ ಚುನಾವಣೆ ಪಾರದರ್ಶಕ ವಾಗಿ ನಡೆಯುವಂತೆ ಜಿಲ್ಲಾಧಿಕಾರಿ ಮತ್ತು ಚುನಾವಣಾಧಿಕಾರಿ ಸೂಕ್ತ ಕ್ರಮ ಕೈ ಗೊಳ್ಳಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಸುದ್ದಿ ಗೋಷ್ಠಿಯಲ್ಲಿಂದು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಅಧಿಕಾರ ರೂಢ ಬಿಜೆಪಿ ಅವೈಜ್ಞಾನಿಕವಾಗಿ ಕೆಲವು ಕಡೆ ಮೀಸಲಾತಿ ನಿಗದಿ ಪಡಿಸಿದೆ. ಕೆಲವು ಅಭ್ಯರ್ಥಿಗಳನ್ನು ಬಲವಂತವಾಗಿ ಕಣದಿಂದ ಹಿಂದೆ ಸರಿ ಯುವಂತೆ ಮಾಡಿದೆ. ಬೆದರಿಕೆ, ದಬ್ಬಾಳಿಕೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಪಾರದರ್ಶಕ ವಾದ ಚುನಾವಣೆ ನಡೆಯು ವಂತಾ ಗಬೇಕಾದರೆ ಚುನಾವಣಾಧಿಕಾರಿ ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯ ವಿದೆ ಎಂದು ರಮಾನಾಥ ರೈ ತಿಳಿಸಿದ್ದಾರೆ.
ರಾಜ್ಯದಲ್ಲಿ ಅಧಿಕಾರ ದಲ್ಲಿರುವ ಬಿಜೆಪಿ ಜನ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಜನ ಸಾಮಾನ್ಯರಿಗೆ ಮತ್ತು ಬಡವರಿಗೆ ಸಹಾ ಯವಾಗುತ್ತಿದ್ದ ಹಲವು ಯೋಜನೆ ಗಳನ್ನು ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಸಮ ರ್ಪಕವಾಗಿ ಅನುಷ್ಠಾನ ಮಾಡುತ್ತಿಲ್ಲ.ಅವೈಜ್ಞಾನಿಕ ವಾಗಿ ವಿದ್ಯುತ್ ದರ ವಿಧಿಸಲಾಗುತ್ತಿದೆ. ವಿಧವೆ ಯರಿಗೆ, ವ್ರದ್ಧರಿಗೆ ಸಮರ್ಪಕವಾಗಿ ಮಾಸಾಶನ ದೊರೆಯುತ್ತಿಲ್ಲ. ಪಡಿತರ ವ್ಯವಸ್ಥೆ ಯನ್ನು ಸಮರ್ಪಕ ವಾಗಿ ಜಾರಿ ಮಾಡಲಾ ಗುತ್ತಿಲ್ಲ. ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ ಸಂತ್ರಸ್ತರಿಗೆ ನೀಡಬೇಕಾದ ತಲಾ 5 ಲಕ್ಷ ರೂ ಪರಿಹಾರ ಧನವನ್ನು ಸರಕಾರ ಇನ್ನೂ ಬಿಡುಗಡೆ ಮಾಡಿಲ್ಲ ಎಂದು ರಮಾನಾಥ ರೈ ಆರೋಪಿಸಿದ್ದಾರೆ.
ದೇಶದಲ್ಲಿ ಸಂವಿಧಾನದ 73ನೆ ತಿದ್ದುಪಡಿಯ ಮೂಲಕ ಪಂಚಾಯತ್ ರಾಜ್ ಅಧಿಕಾರ ವಿಕೇಂದ್ರೀಕರಣ ಕ್ಕೆ ಕಾಂಗ್ರೆಸ್ ಒತ್ತು ನೀಡಿತ್ತು. ಆದರೆ ಹಾಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಗ್ರಾಮ ಪಂಚಾಯತ್ ಅಧಿಕಾರ ವನ್ನು ಮೊಟಕುಗೊಳಿಸಿ ಶಾಸಕರಿಗೆ ಅಧಿಕಾರ ನೀಡಲು ಹೊರಟಿದೆ. ಕೊರೋನ ನಂತರ ದೇಶದ ಶೇ 27ರಷ್ಟು ಜನತೆ ಪೌಷ್ಟಿಕ ಆಹಾರದ ಕೊರತೆಯನ್ನು ಅನುಭವಿ ಸುತ್ತಿದ್ದಾರೆ.ಇನ್ನೊಂದು ಕಡೆ ಬೆಲೆ ಏರಿಕೆ ಯಿಂದ ಜನರು ತತ್ತರಿಸಿ ಹೋಗಿ ದ್ದಾರೆ.ಪೆಟ್ರೋಲ್ ಬೆಲೆ ದಿನದಿಂದ ದಿನಕ್ಕೆ ಏರುತ್ತಾ ಸಾಗಿದೆ. ಭ್ರಷ್ಟಾಚಾರ ದಲ್ಲಿ ಭಾರತ ಏಷ್ಯಾ ಖಂಡದಲ್ಲೇ ಅಗ್ರಸ್ಥಾನ ದಲ್ಲಿದೆ. ನೆರೆಯ ಶ್ರೀ ಲಂಕಾ, ಪಾಕಿಸ್ತಾನ ದೇಶಗಳಲ್ಲೂ ಪೆಟ್ರೋಲ್ ಬೆಲೆ ಭಾರತಕ್ಕಿಂತ ಅಗ್ಗದ ಲ್ಲಿ ದೊರೆಯುತ್ತಿದೆ ಎಂದು ರಮಾನಾಥ ರೈ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಶಶಿಧರ ಹೆಗ್ಡೆ, ಮನಪಾ ಸದಸ್ಯರಾದ ಅಬ್ದುಲ್ ರವೂಫ್ , ನವೀನ್ ಡಿ ಸೋಜ , ಕಾಂಗ್ರೆಸ್ ಪದಾಧಿಕಾರಿ ಗಳಾದ ಮುಸ್ತಫಾ, ಅಪ್ಪಿ, ವಿಶ್ವಾಸ್ ದಾಸ್, ಶುಭೋದಯ ಆಳ್ವಾ ಮೊದಲಾದ ವರು ಉಪಸ್ಥಿತರಿದ್ದರು.