ಯುನಿವೆಫ್ ಕರ್ನಾಟಕ : ಡಿ.18ರಂದು ಕೃಷ್ಣಾಪುರದಲ್ಲಿ ಸೀರತ್ ಸಮಾವೇಶ
ಕೃಷ್ಣಾಪುರ: ಯುನಿವೆಫ್ ಕರ್ನಾಟಕ 2020ರ ನ.27 ರಿಂದ 2021ರ ಜ. 29 ರ ವರೆಗೆ "ಸಾಮಾಜಿಕ ತಾರತಮ್ಯ ಮತ್ತು ಪ್ರವಾದಿ ಮುಹಮ್ಮದ್ (ಸ)" ಎಂಬ ಕೇಂದ್ರೀಯ ವಿಷಯದಲ್ಲಿ ಹಮ್ಮಿಕೊಂಡಿರುವ "ಅರಿಯಿರಿ ಮನುಕುಲದ ಪ್ರವಾದಿಯನ್ನು" ಅಭಿಯಾನದ ಅಂಗವಾಗಿ ಕೃಷ್ಣಾಪುರ ಶಾಖೆಯ ವತಿಯಿಂದ ಡಿ.18ರ ಸಂಜೆ 6.45ಕ್ಕೆ ಕೃಷ್ಣಾಪುರದ ಪ್ಯಾರಡೈಸ್ ಗ್ರೌಂಡ್ ನಲ್ಲಿ ಸೀರತ್ ಸಮಾವೇಶ ಜರಗಲಿದೆ.
"ಭಾರತದಲ್ಲಿ ಇಸ್ಲಾಮ್ ಮತ್ತು ಪ್ರವಾದಿ(ಸ)" ಎಂಬ ವಿಷಯದಲ್ಲಿ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಉಪನ್ಯಾಸ ನೀಡಲಿದ್ದಾರೆ. ಸೌದಿ ಅರೇಬಿಯಾದ ಜುಬೈಲ್ ನ ಉದ್ಯಮಿ ಉಮರ್ ಪಾಣೆಮಂಗಳೂರು ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಯುನಿವೆಫ್ ಕಾರ್ಯದರ್ಶಿ ಸೈಫುದ್ದೀನ್, ಕೃಷ್ಣಾಪುರ ಶಾಖಾಧ್ಯಕ್ಷ ಅಬ್ದುಲ್ ಖಾದರ್ ಬಾಂಬೆ, ಅಭಿಯಾನ ಸಂಚಾಲಕ ವಕಾಝ್ ಅರ್ಶಲನ್ ಮತ್ತು ಸಹ ಸಂಚಾಲಕ ಅತೀಖುರ್ರಹ್ಮಾನ್ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.
Next Story