ಪ್ರಜಾಪ್ರಭುತ್ವ ಉಳಿಯಲು ದಲಿರು ಒಂದಾಗಬೇಕು: ಜಯನ್ ಮಲ್ಪೆ
ಉಡುಪಿ, ಡಿ.20: ಅಸ್ಪೃಶ್ಯತೆ ನಿರ್ಮೂಲನೆ ಮತ್ತು ಜಾತಿ ವಿರೋಧಿ ಹಾಗೂ ಆರ್ಥಿಕ ಹೋರಾಟಗಳನ್ನು ಸಾಕಾರಗೊಳಿಸಲು ಅಂಬೇಡ್ಕರ್ ವಾದಿ, ಎಡ ಪಂಥೀಯರು, ಸಮಾಜವಾದಿಗಳು, ಪ್ರಗತಿಪರರು ಮತ್ತು ದಲಿತರು ತಮ್ಮ ನಡುವಿನ ಒಳಜಗಳಗಳನ್ನು ಬದಿಗಿರಿಸಿ ಒಂದಾಗದಿ ದ್ದರೆ ಪ್ರಜಾಪ್ರಭುತ್ವವೇ ಬುಡಮೇಲಾಗುವುದರಲ್ಲಿ ಸಂದೇಹವಿಲ್ಲ ಎಂದು ಜನಪರ ಹೋರಾಟಗಾರ ಜಯನ್ ಮಲ್ಪೆ ಆತಂಕ ವ್ಯಕ್ತಪಡಿಸಿದ್ದಾರೆ.
ಆದಿಉಡುಪಿ ಮೂಡುಬೆಟ್ಟುವಿನಲ್ಲಿ ರವಿವಾರ ನಡೆದ ಅಂಬೇಡ್ಕರ್ ಯುವ ಸೇನೆಯ ನಗರಶಾಖೆಯ ಉಧ್ಘಾಟನಾ ಸಮಾರಂಭದಲ್ಲಿ ಅವರು ಮುಖ್ಯ ಭಾಷಣಗಾರರಾಗಿ ಮಾತನಾಡಿದರು.
ನಿರುದ್ಯೋಗ, ಬಡತನ, ದಾರಿದ್ರ್ಯತೆ, ಅಭದ್ರತೆಯನ್ನೆದುರಿಸುತ್ತಿರುವ ದಲಿತರ ಭವಿಷ್ಯವೇ ಹಾಳಾಗುತ್ತಿದೆ. ದಲಿತರು ಈ ಸಂದರ್ಭದಲ್ಲಿ ಸಮಸಮಾಜಕ್ಕಾಗಿ ಹೋರಾಟ ನಡೆಸುವುದು ಅನಿವಾರ್ಯ ಎಂದು ಅವರು ಹೇಳಿದರು.
ಶಾಖೆಯನ್ನು ಮೂಡುಬೆಟ್ಟುವಿನ ನಗರಸಭಾ ಸದಸ್ಯ ಶೀಶ ಭಟ್ ಉದ್ಘಾಟಿಸಿ ದರು. ಅಧ್ಯಕ್ಷತೆಯನ್ನು ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ನಗರಸಭಾ ಸದಸ್ಯ ವಿಜಯ್ ಕೊಡವೂರು, ದಲಿತ ಮುಖಂಡ ಗಣೇಶ್ ನೆರ್ಗಿ ಮಾತನಾಡಿದರು.
ವೇದಿಕೆಯಲ್ಲಿ ಸಮಾಜ ಸೇವಕ ಮಹಮ್ಮದ್ ಸಾಧಿಕ್, ಮಾಜಿ ನಗರಸಭಾ ಸದಸ್ಯ ಗಣಪತಿ ಶೆಟ್ಟಿಗಾರ್, ಹಿರಿಯ ದಲಿತ ಮುಖಂಡ ಸುಂದರ್ ಕಪ್ಪೆಟ್ಟು, ಶೇಖರ್ ಕಂಬಳಕಟ್ಟ, ಶಶಿಕಲಾ ತೊಟ್ಟಂ, ಸುಜಾತ ಸುವರ್ಣ, ರಮೇಶ್ ಪಾಲ್, ಮಂಜುನಾಥ ಕಪ್ಪೆಟ್ಟು ಮೊದಲಾದವರು ಉಪಸ್ಥಿತರಿ ದ್ದರು. ಶಿವ ಚಂಡ್ಕಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಮಿತ್ ನೆರ್ಗಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವಿಜಯ್ ತೋಕೊಳಿ ವಂದಿಸಿದರು.