ಕುಂದಾಪುರದಲ್ಲಿ ಆಯುಷ್ ಧಾಮ ಆರ್ಥೋ ನ್ಯೂರೋ ಆಸ್ಪತ್ರೆ ಶುಭಾರಂಭ
ಕುಂದಾಪುರ, ಡಿ.25: ಕುಂದಾಪುರದ ಮನೆ ಮನದಲ್ಲಿ ಇಂದಿಗೂ ಚಿರ ಸ್ಥಾಯಿ ಹೆಸರಾಗಿರುವ ರಾಮಕೃಷ್ಣ ಆಸ್ಪತ್ರೆಯು ಆಯಷ್ ಧಾಮ ಆರ್ಥೋ ನ್ಯೂರೋ ಆಸ್ಪ್ರೆಯಾಗಿ ಇತ್ತೀಚೆಗೆ ಉದ್ಘಾಟನೆಗೊಂಡಿತು.
ಸುಸಜ್ಜಿತ ಕಟ್ಟಡ, ಸರ್ವ ರೀತಿಯ ಸೌಲಭ್ಯ, ಅನುಭವಿ ವೈದ್ಯರ ತಂಡ, ನುರಿತ ಸಿಬಂದಿ ವರ್ಗವನ್ನು ಈ ಆಸ್ಪತ್ರೆ ಹೊಂದಿದೆ. ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿ ಹೊಂದಿ ಎರಡು ದಶಕಕ್ಕೂ ಹೆಚ್ಚು ಅನುಭವವಿರುವ ಮತ್ತು ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ, ಮುಖ್ಯ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಮತ್ತು ಪ್ರಸ್ತುತ ಬ್ರಹ್ಮಾವರ ಕ್ಷೇಮ ಧಾಮ ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಬಿ.ವಿನಯ ಚಂದ್ರ ಶೆಟ್ಟಿ ತನ್ನ ಅನುಭವಿ ವೈದ್ಯ ತಂಡದೊಂದಿಗೆ ಈ ಆಸ್ಪತ್ರೆಯನ್ನು ಮುನ್ನಡೆಸಲಿದ್ದಾರೆ.
ಕರ್ನಾಟಕದ ಹೆಸರಾಂತ ವೈದ್ಯರ ಜೊತೆ ಕೇರಳ, ತಮಿಳುನಾಡು, ಪುಣೆ, ಆಂಧ್ರಪ್ರದೇಶದಂತಹ ರಾಜ್ಯಗಳ ಸಂದರ್ಶಕರು ನಿಯಮಿತವಾಗಿ ಸಂದರ್ಶನ ಮತ್ತು ಸಮಾಲೋಚನೆಗೆ ಲಭ್ಯ ಇರಲಿದ್ದಾರೆ. ಯೋಗ ಮತ್ತು ಬೇರೆ ಪಾರಂಪರಿಕ ಚಿಕಿತ್ಸಾ ಪದ್ಧತಿಗಳ ಸಂಯೋಜನಾ ಚಿಕಿತ್ಸಾ ಪದ್ದತಿಯನ್ನು ಅಳವಡಿಸಿಕೊಂಡು ಇಲ್ಲಿ ಗುಣಾತ್ಮಕ ಫಲಿತಾಂಶ ನೀಡಲು ಪ್ರಯತ್ನಿಸಲಾಗು ತ್ತಿದೆ ಎಂದು ಡಾ.ಬಿ.ವಿನಯಚಂದ್ರ ಶೆಟ್ಟಿ ತಿಳಿಸಿದ್ದಾರೆ.
ಆಸ್ಪತ್ರೆಯ ಸೌಲಭ್ಯಗಳು !
ಸುಸಜ್ಜಿತ ಒಳರೋಗಿ ಮತ್ತು ಹೊರರೋಗಿ ವಿಭಾಗ, ತಜ್ಞ ವೈದ್ಯರುಗಳ ಗುಣಮಟ್ಟದ ಸೇವೆ, ಕುಟುಂಬ ವೈದ್ಯ ಕ್ಲಿನಿಕ್, ಸಿಖ ಚಿಕಿತ್ಸಾ ವಿಭಾಗ, ಆಯು ರ್ವೇದ, ಯೋಗ, ನ್ಯಾಚುರೋಪತಿ, ಅಲೋಪತಿ, ಫಿಸಿಯೋಥೆರಪಿ - ಸಂಯೋಜನಾ ಚಿಕಿತ್ಸಾ ಪರಿಕ್ರಮ, ಮರ್ಮ ಚಿಕಿತ್ಸೆ, ಹಿಜಾಮ, ಕ್ಷಾರಸೂತ್ರ, ಅಗ್ನಿಕರ್ಮ, ಕೆರಳೀಯ ಪಂಚಕರ್ಮ ಚಿಕಿತ್ಸೆ, ಸುಸಜ್ಜಿತ ಪ್ರಯೋಗಾಲಯ ಮತ್ತು ಔಷಧಾಲಯಗಳು ಈ ಆಸ್ಪತ್ರೆಯಲ್ಲಿರುವ ಸೌಲಭ್ಯಗಳಾಗಿವೆ.