ಹಳೆಯಂಗಡಿ: ಸಿಡಿಲು ಬಡಿದು ಇಬ್ಬರು ಮಕ್ಕಳು ಗಂಭೀರ
ಮಂಗಳೂರು, ಎ.20: ಸಿಡಿಲು ಬಡಿದು ಇಬ್ಬರು ಮಕ್ಕಳು ಗಂಭೀರ ಗಾಯಗೊಂಡಿರುವ ಘಟನೆ ನಗರ ಹೊರ ವಲಯದ ಹಳೆಯಂಗಡಿಯ ಇಂದಿರಾ ನಗರ ಎಂಬಲ್ಲಿ ಇಂದು ಸಂಜೆ ನಡೆದಿದೆ.
ಘಟನೆಯಿಂದ ಇಂದಿರಾನಗರ ನಿವಾಸಿ ಉಸ್ಮಾನ್ ಎಂಬವರ ಮಗ ಸಿನಾನ್ (5) ಹಾಗೂ ಮೂಲತಃ ಗಂಗಾವತಿಯ ಸದ್ಯ ಇಂದಿರಾನಗರದಲ್ಲಿ ವಾಸವಾಗಿರುವ ದುರ್ಗಪ್ಪ ಎಂಬವರ ಮಗ ಮಾರುತಿ(6) ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಗಾಯಗೊಂಡ ಇಬ್ಬರನ್ನೂ ಸ್ಥಳೀಯರು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
Next Story