ರವೀಂದ್ರನಾಥ ಶೆಟ್ಟಿ
ಮಂಗಳೂರು, ಮೇ 23: ನಗರದ ಉರ್ವ ಕೆನರಾ ಪ್ರೌಢ ಶಾಲೆಯ ಶಿಕ್ಷಕ, ಬಹುಮುಖ ಪ್ರತಿಭೆ ರವೀಂದ್ರನಾಥ ಶೆಟ್ಟಿ(44) ಹೃದಯಾಘಾತದಿಂದ ರವಿವಾರ ನಿಧನರಾದರು.
ಮೃತರು ಪತ್ನಿ, ಮೂರು ವರ್ಷ ಪ್ರಾಯದ ಮಗು ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಮೂಲತಃ ಬಾಕ್ರಬೈಲಿನವರಾಗಿರುವ ಅವರು ಕೆನರಾ ಪ್ರೌಢ ಶಾಲೆಯಲ್ಲಿ ಕಳೆದ 20 ವರ್ಷದಿಂದ ಅಧ್ಯಾಪಕರಾಗಿದ್ದರು. ಎಂಎ, ಎಂಫಿಲ್ ಪದವೀಧರರಾಗಿದ್ದ ಅವರು ಎನ್ಸಿಸಿ ಅಧಿಕಾರಿಯೂ ಆಗಿ ಸೇವೆ ಸಲ್ಲಿಸಿದ್ದರು. ಎನ್ಸಿಸಿಯ ಸಾಧನೆಗಾಗಿ ಹತ್ತು ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಹವ್ಯಾಸಿ ಯಕ್ಷಗಾನ ಮತ್ತು ರಂಗಭೂಮಿ ಕಲಾವಿದರಾಗಿದ್ದ ಅವರು, ಉತ್ತಮ ಕಾರ್ಯಕ್ರಮ ನಿರೂಪಕರಾಗಿಯೂ ಮೆಚ್ಚುಗೆ ಗಳಿಸಿದ್ದರು.
Next Story