ಪಿ.ಭಾಸ್ಕರ ಆಚಾರ್ಯ
ಉಡುಪಿ, ಮೇ 28: ಬೆಂಗಳೂರಿನಲ್ಲಿ ಹಿಂದಿನ ಕಾರ್ಪೋರೇಷನ್ ಬ್ಯಾಂಕಿನ ಎಜಿಎಂ ಆಗಿ ಕಾರ್ಯನಿರ್ವಹಿಸುತಿದ್ದ ಪಿ.ಭಾಸ್ಕರ ಆಚಾರ್ಯ ಅವರು ಗುರುವಾರ ನಿಧನರಾದರು. ಅವರಿಗೆ 59 ವರ್ಷ ಪ್ರಾಯವಾಗಿತ್ತು.
ಕಾರ್ಪೋರೇಷನ್ ಬ್ಯಾಂಕ್ನಲ್ಲಿ ತನ್ನ ಕಾರ್ಯಕ್ಷಮತೆಯಿಂದ ಪದೋನ್ನತಿ ಹೊಂದುತ್ತಾ ಮಲ್ಪೆ, ಬ್ರಹ್ಮಾವರ (ವಾರಂಬಳ್ಳಿ), ಅಹ್ಮದಾಬಾದ್, ಹೊಸದಿಲ್ಲಿ, ಚೆನ್ನೈ, ಬೆಂಗಳೂರು ಶಾಖೆಗಳಲ್ಲಿ ಸೇವೆ ಸಲ್ಲಿಸಿ ಗ್ರಾಹಕ ಸ್ನೇಹಿಯಾಗಿದ್ದರು.
ನಿಟ್ಟೂರು ಪ್ರೌಢ ಶಾಲೆ ಹಾಗೂ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದ ಇವರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.
Next Story