ದೇವೇಂದ್ರ ನಾಯಕ್
ಕಾರ್ಕಳ : ಬಜಗೋಳಿ ಪ್ರೌಢಶಾಲಾ ನಿವೃತ್ತ ಮುಖ್ಯಶಿಕ್ಷಕ, ಪ್ರಸಿದ್ಧ ಜ್ಯೋತಿಷ್ಯ ಹಾಗೂ ವಾಸ್ತು ತಜ್ಞ ಕುಕ್ಕುಂದೂರಿನ ದೇವೇಂದ್ರ ನಾಯಕ್ (74) ಜೂ. 1ರಂದು ಹೃದಯಾಘಾತದಿಂದ ನಿಧನ ಹೊಂದಿದರು.
ಮದುವೆ ಸಂಬಂಧಿ ಜಾತಕವನ್ನು ಉಚಿತವಾಗಿ ಹೇಳುತ್ತಿದ್ದ ದೇವೇಂದ್ರ ನಾಯಕ್ ಅವರು ವಾಸ್ತು ತಜ್ಞರಾಗಿ ವಿದೇಶಗಳಿಗೂ ತೆರಳುತ್ತಿದ್ದರು. ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲೂ ಗುರುತಿಸಿಕೊಂಡ ಮೃತರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
Next Story