ಹೊಸಬೆಟ್ಟು ಗುತ್ತು ಸುಂದರ ಶೆಟ್ಟಿ
ಮಂಗಳೂರು: ಹೊಸಬೆಟ್ಟು ಗುತ್ತು ಸುಂದರ ಶೆಟ್ಟಿ (81) ಮಂಗಳವಾರ ನಿಧನರಾಗಿದ್ದಾರೆ. ಮೂಲತಃ ಕೃಷಿಕರಾಗಿದ್ದ ಅವರು ಬಲ್ಲಾಳ್ ಭಾಗ್ ಶ್ರೀನಿಧಿ ಸುಂದರ ಶೆಟ್ಟಿ ಎಂದು ಎಲ್ಲರಿಗೂ ಪರಿಚಿತರು. ಅಸ್ಟಿನಾಲ್ ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು.
ಬಲ್ಲಾಳ್ ಬಾಗ್ ಗುರ್ಜಿ ಉತ್ಸವ, ಹೊಸಬೆಟ್ಟು ಕೋಡ್ದಬ್ಬು ದೈವಸ್ಥಾನ,ಹೊಸಬೆಟ್ಟು ಕಂಬಳ,ಅಲ್ಲದೆ ಅನೇಕ ದೇವಸ್ಥಾನ ದೈವಸ್ಥಾನಗಳ ಜೀರ್ಣೋದ್ದಾರ ಸಮಿತಿಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದು, ರಾಜಕೀಯವಾಗಿ ಜನತಾದಳದ ಸಕ್ರಿಯ ಕಾರ್ಯಕರ್ತರಾಗಿದ್ದರು. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ನಾಮನಿರ್ದೇಶಕ ಸದಸ್ಯರಾಗಿದ್ದರು. ಮೃತರು ಪತ್ನಿ, ಪುತ್ರಿ ಹಾಗೂ ಅನೇಕ ಬಂಧುಮಿತ್ರರನ್ನು ಅಗಲಿದ್ದಾರೆ.
ಸಂತಾಪ: ಸುಂದರ ಶೆಟ್ಟಿ ಅವರ ನಿಧನಕ್ಕೆ ಎಚ್ಎಂಎಸ್ ರಾಜ್ಯಾಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ, ಬಿಎಂಎಸ್ ರಾಜ್ಯಾಧ್ಯಕ್ಷ ವಿಶ್ವನಾಥ ಶೆಟ್ಟಿ, ಪದವು ಮೇಗಿನ ಮನೆ ಯಜಮಾನ ಮಂಜಣ್ಣ ಶೆಟ್ಟಿ, ಉಮೇಶ್ ರೈ, ಫುಡ್ ಲ್ಯಾಂಡ್ ಗಣೇಶ್ ಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.