ಮೀನು ಮಾರಾಟಗಾರನ ವಿರುದ್ಧ ಕೋಮು ದ್ವೇಷದ ಫೇಸ್ಬುಕ್ ಪೋಸ್ಟ್: ದೂರು ದಾಖಲು
ಸಿದ್ದಾಪುರ (ಕೊಡಗು): ನೆಲ್ಯಹುದಿಕೇರಿ ಮೀನು ಮಾರಾಟಗಾರನ ವಿರುದ್ಧ ಕೋಮು ದ್ವೇಷದ ಸಂದೇಶವನ್ನು ಪೋಸ್ಟ್ ಮಾಡಿರುವ ವ್ಯಕ್ತಿಯ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಮಡಿಕೇರಿಯ ಸೈಬರ್ ಪೊಲೀಸ್ ಠಾಣೆಗೆ ಮೀನು ಮಾರಾಟಗಾರ ಮುಹಮ್ಮದ್ ಜುನೈದ್ ದೂರು ನೀಡಿದ್ದಾರೆ.
ಲೋಕೇಶ್ ತಿಮ್ಮಯ್ಯ ಚೆಂಡ್ರಿಮಾಡ ಎಂಬ ಫೇಸ್ಬುಕ್ ಖಾತೆಯಲ್ಲಿ, "ಹಿಂದೂಗಳನ್ನು ಗುರಿ ಮಾಡಿಕೊಂಡು ಲಾಕ್ ಡೌನ್ ಸಮಯದಲ್ಲಿ ಮೀನುಗಳಿಗೆ ಕೆಮಿಕಲ್ ಪೌಡರ್ ಗಳನ್ನು ಬಳಸಿ ಮೀನುಗಳನ್ನು ಮಾರಾಟ ಮಾಡುತ್ತಿದ್ದಾನೆ. ಈತನಿಂದ ಕ್ಯಾನ್ಸರ್ ಬರುತ್ತೆ. ಹಿಂದೂಗಳು ಮುಸಲ್ಮಾನರ ಬಳಿ ಮೀನು ಖರೀದಿ ಮಾಡುವವರು ಎಚ್ಚರಿಕೆಯಿಂದ ಇರಿ" ಎಂದು ಮುಹಮ್ಮದ್ ಜುನೈದ್ ಅವರ ಫೋಟೋ ಬಳಸಿ ಕೋಮು ದ್ವೇಷದ ಸಂದೇಶವನ್ನು ಪೋಸ್ಟ್ ಮಾಡಿದ್ದಾನೆ.
ಇದರ ವಿರುದ್ಧ ಮುಹಮ್ಮದ್ ಜುನೈದ್ ಮಡಿಕೇರಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Next Story