ದೇವಚಳ್ಳ: ಪಿ.ಡಿ.ಓ.ಗೆ ಬೆದರಿಕೆ ಪ್ರಕರಣ; ಆರೋಪಿಗೆ ಜಾಮೀನು ಮಂಜೂರು
ದೇವಚಳ್ಳ: ಕೋವಿಡ್ ಸಂದರ್ಭದ ಘಟನೆಯೊಂದಕ್ಕೆ ಸಂಬಂಧಿಸಿದಂತೆ ದೇವಚಳ್ಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗುರುಪ್ರಸಾದ್ ರವರಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಕಂದ್ರಪ್ಪಾಡಿಯ ಉದಯ ಕುಮಾರ್ ಮುಂಡೋಡಿಯವರ ವಿರುದ್ಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಸೇಷನ್ಸ್ ನ್ಯಾಯಾಲಯ ಉದಯಕುಮಾರ್ ರವರಿಗೆ ನಿರೀಕ್ಷಣಾ ಜಾಮೀನು ಆದೇಶ ಮಾಡಿದೆ. ಉದಯಕುಮಾರ್ ಪರವಾಗಿ ಸುಳ್ಯದ ಯುವ ನ್ಯಾಯವಾದಿ ವಿನಯಕುಮಾರ್ ಮುಳುಗಾಡು ವಾದಿಸಿದ್ದರು.
Next Story