ಜೆ.ಸಯ್ಯದ್
ಬಂಟ್ವಾಳ, ಸೆ.16: ತಾಲೂಕಿನ ಕೈಕಂಬ ಸಮೀಪದ ಶಾಂತಿಅಂಗಡಿ ನಿವಾಸಿ ಜೆ.ಸಯ್ಯದ್ (60) ಕೆಲವು ಸಮಯದ ಅಸೌಖ್ಯದಿಂದ ಗುರುವಾರ ಬೆಳಗ್ಗೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಶಾಂತಿಅಂಗಡಿಯಲ್ಲಿ ರೇಶನ್ ಅಂಗಡಿ ನಡೆಸುತ್ತಿದ್ದ ಅವರು ಶಾಂತಿಅಂಗಡಿಯ ಮುಸ್ಲಿಮ್ ಯಂಗ್ ಮೆನ್ಸ್ ಅಸೋಸಿಯೇಶನ್ ನಲ್ಲಿ ಹಲವಾರು ವರ್ಷಗಳ ಕಾಲ ಸಕ್ರಿಯವಾಗಿ ಸೇವೆ ಸಲ್ಲಿಸಿದ್ದಾರೆ.
ಮೃತರು ಪತ್ನಿ, ಮೂವರು ಪುತ್ರಿಯರು, ಮೂವರು ಪುತ್ರರು ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರಿಗೆ ಮುಸ್ಲಿಮ್ ಯಂಗ್ ಮೆನ್ಸ್ ಅಸೋಸಿಯೇಷನ್ ಶಾಂತಿಅಂಗಡಿ ಅಧ್ಯಕ್ಷ ಹಾಗೂ ಸದಸ್ಯರು ಸಂತಾಪ ಸೂಚಿಸಿದ್ದಾರೆ.
Next Story