ಎಂಜಿಎಂ ಕಾಲೇಜು ಪ್ರಾಂಶುಪಾಲರ 4ನೇ ಕೃತಿ ಬಿಡುಗಡೆ
ಉಡುಪಿ, ಅ.25: ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ್ ಎಸ್. ನಾಯ್ಕ ಇವರ ನಾಲ್ಕನೇ ಕೃತಿ ‘ದಂಡಿಗೆ ಹನುಮ’ವನ್ನು ಉಡುಪಿಯ ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯತೀರ್ಥ ಸ್ವಾಮೀಜಿ ಸೋಮವಾರ ಲೋಕಾರ್ಪಣೆ ಗೊಳಿಸಿದರು.
ಹೊನ್ನಾವರ ತಾಲೂಕಿನ ಚಂದಾವರದಲ್ಲಿರುವ ಹನುಮಂತ ಕ್ಷೇತ್ರದ ಕುರಿತು ಈ ಕೃತಿಯನ್ನು ರಚಿಸಲಾಗಿದೆ. ಕೃತಿಯ ಬಗ್ಗೆ ಅದಮಾರುಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿ ಶುಭಕೋರಿದರು.
ಈ ಸಂದರ್ಭದಲ್ಲಿ ಶಾರದಾ ದೇವಿದಾಸ್, ಎಂಜಿಎಂ ಕಾಲೇಜಿನ ನಿಕಟ ಪೂರ್ವ ಪ್ರಾಂಶುಪಾಲ ಡಾ.ಎಂ.ಜಿ.ವಿಜಯ, ಜ್ಯೋತಿ ವಿಜಯ ಹಾಗೂ ಎಂ.ಜಿ.ಎಂ. ಕಾಲೇಜಿನ ಅಧ್ಯಾ ಪಕ ರಾಜಮೂರ್ತಿ ಉಪಸ್ಥಿತರಿದ್ದರು.
Next Story