ಪ್ರತ್ಯೇಕ ಪ್ರಕರಣ: ಮೂವರ ಆತ್ಮಹತ್ಯೆ
ಹೆಬ್ರಿ, ನ.6: ಮದ್ಯಪಾನ ಸೇವನೆ ಚಟ ಹೊಂದಿದ್ದ ಬೇಳಂಜೆ ಗ್ರಾಮದ ತೋಳಾರಬೆಟ್ಟು ವನಜಾ(58) ಎಂಬವರು ಆರೋಗ್ಯ ಸಮಸ್ಯೆಯಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ನ.5ರಂದು ರಾತ್ರಿ ಮನೆಯ ಕೋಣೆಯಲ್ಲಿರುವ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ: ಕಿಡ್ನಿ ಖಾಯಿಲೆಯಿಂದ ಬಳಲುತ್ತಿದ್ದ ಪತಿಯ ವಿಚಾರದಲ್ಲಿ ಮನನೊಂದ ವಕ್ವಾಡಿ ಗ್ರಾಮದ ಬೆಟ್ಟಿನಮನೆ ಹೆಗ್ಗಾರಬೈಲು ನಿವಾಸಿ ಶಂಕರ ಶೆಟ್ಟಿ ಎಂಬವರ ಪತ್ನಿ ಸರಸ್ವತಿ ಶೆಟ್ಟಿ(39) ಎಂಬವರು ನ.6ರಂದು ಬೆಳಗ್ಗೆ ಮನೆಯ ಸಮೀಪದ ನಂದಿಕೇಶ್ವರ ದೇವಸ್ಥಾನದ ಬಳಿಯ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಂದೂರು: ಕೈಸಾಲ ಮತ್ತು ಬ್ಯಾಂಕಿನಲ್ಲಿ ಮಾಡಿರುವ ಸಾಲ ಮರುಪಾವತಿ ಸಲು ಸಾಧ್ಯವಾಗದ ಚಿಂತೆಯಲ್ಲಿ ಮನನೊಂದ ಯಡ್ತರೆ ಗ್ರಾಮದ ಆಲಂದೂರು ನಿವಾಸಿ ರಾಮ ಗಾಣಿಗ(78) ಎಂಬವರು ನ.4ರಂದು ಮಧ್ಯಾಹ್ನ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.