ಶ್ರೀ ವಿಶ್ವೇಶತೀರ್ಥರಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ಪ್ರದಾನ
ಹೊಸದಿಲ್ಲಿ, ನ. 8: ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರಿಗೆ ನೀಡಲಾಗಿರುವ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಶ್ರೀ ವಿಶ್ವಪ್ರಸನ್ನ ತೀರ್ಥರಿಗೆ ಪ್ರದಾನ ಮಾಡಿದರು.
ಗುರುಗಳ ಪರವಾಗಿ ಪದ್ಮ ವಿಭೂಷಣ ಸ್ವೀಕರಿಸುವ ಮುನ್ನ ಪಾದುಕೆ ಕಳಚಿಟ್ಟ ಪೇಜಾವರ ಶ್ರೀಗಳ ಗುರುಭಕ್ತಿಗೆ ರಾಷ್ಟ್ರಪತಿ ಭವನ ಸಾಕ್ಷಿಯಾಯಿತು.
Next Story