ಡಿ.4: ದ.ಕ. ಜಿಲ್ಲಾ ಮಟ್ಟದ ಯುವಜನೋತ್ಸವ
ಮಂಗಳೂರು, ನ.30: ದ.ಕ. ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕಡಬ ತಾಲೂಕು ಯುವಜನ ಒಕ್ಕೂಟ, ಸವಣೂರಿನ ಸವಣೂರು ಯುವಕ ಮಂಡಲ ಹಾಗೂ ವಿದ್ಯಾರಶ್ಮಿ ವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಡಿ. 4ರಂದು ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ದ.ಕ. ಜಿಲ್ಲಾ ಮಟ್ಟದ ಯುವಜನೋತ್ಸವವನ್ನು ಆಯೋಜಿಸಲಾಗಿದೆ.
ಜನಪದ ನೃತ್ಯ, ಜನಪದ ಹಾಡು, ಏಕಪಾತ್ರಾಭಿನಯ, ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ವಾದ್ಯ, ಹಾರ್ಮೋನಿಯಂ, ಗಿಟಾರ್ವಾದನ, ಶಾಸ್ತ್ರೀಯ ನೃತ್ಯ ಹಾಗೂ ಆಶುಭಾಷಣ ಸ್ಫರ್ಧೆಗಳನ್ನು ಏರ್ಪಡಿಸಲಾಗಿದೆ. ಯುವಜನೋತ್ಸವದಲ್ಲಿ 15 ರಿಂದ 29 ವರ್ಷದೊಳಗಿನ ಎಲ್ಲಾ ಯುವಕ ಸಂಘ, ಯುವತಿ ಮಂಡಲ, ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಬಹುದು.
ಈ ಸ್ಪರ್ಧೆಗಳಲ್ಲಿ ಭಾಗವಹಿಸಲು ಇಚ್ಛಿಸುವ ನೃತ್ಯ ಶಾಲೆಗಳು, ಶಾಲಾ ಕಾಲೇಜುಗಳು, ಯುವಕ/ಯುವತಿ ಮಂಡಲಗಳ ಸದಸ್ಯರು ಡಿ..4ರ ಬೆಳಗ್ಗೆ 9 ಗಂಟೆಯೊಳಗೆ ಹೆಸರನ್ನು ಸವಣೂರು ಯುವಕ ಮಂಡಲದ ಸಂಘಟಕರಲ್ಲಿ ನೋಂದಾಯಿಸಬಹುದು.
ಹೆಚ್ಚಿನ ಮಾಹಿತಿಗೆ ಮಂಗಳೂರು ತಾಲೂಕಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧೀಕ್ಷಕ ಮಂಜುಎಲ್. ಮೊ.ಸಂ: 9060431251 ಅಥವಾ ಕಡಬ ತಾಲೂಕಿನ ಸವಣೂರುಯುವಕ ಮಂಡಲದ ಸಂಘಟಕ ಸುರೇಶ್ರೈ ಮೊ.ಸಂ: 9449901945ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.