ಗಾಂಜಾ ಸೇವನೆ ಆರೋಪ: ಯುವಕನ ಸೆರೆ
ಮಂಗಳೂರು, ಡಿ.3: ನಗರದ ಜೆಪ್ಪು ಲೋಬೋ ನದಿ ಕಿನಾರೆಯಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಆರೋಪದ ಮೇಲೆ ಪೊಲೀಸರು ಗೂಡ್ ಶೆಡ್ ನಿವಾಸಿ ಧನರಾಜ್ ಶೆಟ್ಟಿ (23) ಎಂಬಾತನನ್ನು ಬಂಧಿಸಿದ್ದಾರೆ.
ಡಿ.2ರಂದು ಬೆಳಗ್ಗೆ 7:45ಗಂಟೆಗೆ ನಗರದ ಜೆಪ್ಪು ಎಂಪಾಸಿಸ್ ಹತ್ತಿರದ ಲೋಬೋ ನದಿ ಕಿನಾರೆ ಬಳಿಯಿಂದ ಈತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ ಎಂದು ಪ್ರಕರಣ ದಾಖ ಲಿಸಿಕೊಂಡಿರುವ ಪಾಂಡೇಶ್ವರ ಪೊಲೀಸರು ತಿಳಿಸಿದ್ದಾರೆ.
Next Story