ಉಪ್ಪಿನಂಗಡಿ: ಅಗಲಿದ ಸೇನಾನಿಗಳಿಗೆ ಶೃದ್ಧಾಂಜಲಿ
ಉಪ್ಪಿನಂಗಡಿ: ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟ ದೇಶದ ಮೂರು ಸೇನಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ದಂಪತಿ ಸಹಿತ ಹದಿಮೂರು ಮಂದಿ ಸೇನಾ ಯೋಧರಿಗೆ ಇಲ್ಲಿನ ಶ್ರೀ ಕಾಳಿಕಾಂಬಾ ಭಜನಾ ಮಂಡಳಿಯ ಆಶ್ರಯದಲ್ಲಿ ಹಣತೆ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಇಲ್ಲಿನ ಶ್ರೀ ಮಹಾಕಾಳಿ ದೇವಸ್ಥಾನದ ಮುಂಭಾಗ ನಡೆದ ಈ ಭಾವಪೂರ್ಣ ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಾಗವಹಿಸಿ ಮಡಿದ ಯೋಧರಿಗೆ ನುಡಿ ನಮನ ಸಲ್ಲಿಸಿದರು. ಮಕ್ಕಳು ಹಣತೆಯನ್ನು ಬೆಳಗಿಸಿ ಮಡಿದ ಸೇನಾಧಿಕಾರಿಯವರಿಗೆ ಕಂಬನಿ ಮಿಡಿದರು.
ಈ ವೇಳೆ ಭಜನಾ ಮಂಡಳಿಯ ಮಾಜಿ ಅಧ್ಯಕ್ಷ ಸುಧಾಕರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಮುಳಿಯ, ನೆಕ್ಕಿಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಶಾಂತ್ ಎನ್., ಭಜನಾ ಮಂಡಳಿ ಅಧ್ಯಕ್ಷ ಶರತ್ ಕೋಟೆ, ಕಾರ್ಯದರ್ಶಿ ಮಾಧವ ಆಚಾರ್ಯ, ಪ್ರಮುಖರಾದ ಯು.ಜಿ. ರಾಧ, ಯತೀಶ್ ಶೆಟ್ಟಿ, ಚಂದ್ರಹಾಸ ಹೆಗ್ಡೆ, ಕಂಗ್ವೆ ವಿಶ್ವನಾಥ ಶೆಟ್ಟಿ, ಐ ಚಿದಾನಂದ ನಾಯಕ್, ಹರಿರಾಮಚಂದ್ರ, ಸ್ವರ್ಣೇಶ್, ನಿತೇಶ್ ಗಾಣಿಗ, ಶಿಲ್ಪಾ ಆಚಾರ್ಯ, ಸುಂದರ ಆದರ್ಶನಗರ, ಜಗದೀಶ್ ಶೆಟ್ಟಿ, ಐ. ಪುರುಷೊತ್ತಮ ನಾಯಕ್, ಯು. ಚಂದ್ರಶೇಖರ್, ಶೋಭಾ ದಯಾನಂದ್, ಸಾಯಿರತ್ನ ಸಿ.ಎನ್., ಹರಿಪ್ರಸಾದ್, ಸುಂದರ ಗೌಡ, ಹರೀಶ್ ನಾಯಕ್, ಸತೀಶ್ ಹೆಗ್ಡೆ , ಕೊಯಿಲ ಶ್ರೀಧರ್ ರಾವ್ ಮೊದಲಾದವರು ಭಾಗವಹಿಸಿದ್ದರು.