‘ಉಡುಪಿ ಕೇದಾರ ಕಜೆ’ ಸಾವಾಯವ ಅಕ್ಕಿ ಬಿಡುಗಡೆ
ಉಡುಪಿ, ಡಿ.14: ಉಡುಪಿ ಕೇದಾರೋತ್ಥಾನ ರೈತ ಉತ್ಪಾದಕರ ಕಂಪನಿಯ ನೂತನ ಕಚೇರಿ ಹಾಗೂ ಹಡಿಲು ಭೂಮಿ ಕೃಷಿ ಅಂದೋಲನದಡಿ ಬೆಳೆದ ಭತ್ತದಿಂದ ಉತ್ಪಾದಿಸಿದ ಅಕ್ಕಿ ‘ಉಡುಪಿ ಕೇದಾರ ಕಜೆ’ ಇದರ ಮಾರಾಟ ಕೇಂದ್ರವನ್ನು ಇತ್ತೀಚೆಗೆ ಪಶುಸಂಗೋಪನೆ ಸಚಿವರಾದ ಪ್ರಭು ಚವ್ಹಾಣ್ ಉಡುಪಿಯ ಹಿರಣ್ಯ ಫೆನಾನ್ಸ್ ಕಟ್ಟಡದಲ್ಲಿ ಉದ್ಘಾಟಿಸಿದರು.
ಬಳಿಕ ಸಚಿವರು ಗ್ರಾಹಕರಾದ ಸಿ.ಎ.ನಾರಾಯಣ ಅವರಿಗೆ ಅಕ್ಕಿ ವಿತರಿಸಿದರು. ಕೇದಾರೋತ್ಥಾನ ಟ್ರಸ್ಟ್ ಅಧ್ಯಕ್ಷ, ಶಾಸಕ ಕೆ.ರಘುಪತಿ ಭಟ್ ಉಪಸ್ಥಿತರಿದ್ದರು. ನಗರ ಸಭೆ ಸದಸ್ಯರುಗಳು, ಕೇದಾರೋತ್ಥಾನ ಟ್ರಸ್ಟಿಗಳು, ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ ಕಾರ್ಯಕ್ರಮ ನಿರೂಪಿಸಿದರು.
Next Story