ಜೋಗರ್ಸ್ ಪಾರ್ಕ್ ಸದಸ್ಯರಿಂದ ಶ್ರಮದಾನ
ಮಂಗಳೂರು, ಡಿ.19: ನಗರದ ಮೇರಿಹಿಲ್ನ ಜೋಗರ್ಸ್ ಪಾರ್ಕ್ನ ಸದಸ್ಯರು ರವಿವಾರ ಹೆಲಿಪ್ಯಾಡ್ ಮೈದಾನದಲ್ಲಿ ಸ್ವಚ್ಚತಾ ಶ್ರಮದಾನ ನಡೆಸಿದರು.
ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ನಾಗೇಶ್ ರಾವ್ ಕಲ್ಯಾಣಪುರ, ಸದಸ್ಯರಾದ ಶಶಿಕಾಂತ್ ಖೋತ್, ಮಂಜು ಹಾಸನ, ಹರೀಶ್ ಪದವಿನಂಗಡಿ, ನಿಸರ್ಗ ಮಂಜುನಾಥ್, ರಾಧಾಕೃಷ್ಣ, ವಸಂತ ಪೂಜಾರಿ, ನವೀನ್ ಶೆಟ್ಟಿ, ದೀಪಕ್, ರೋಶನಿ, ರೀತಾ ಶೆಟ್ಟಿ, ಸುಪ್ರಿಯಾ, ರಾಜನ್, ಸಂತೋಷ್, ಹರೀಶ್ ಮೋಟುಕಾನ ಮತ್ತಿತರರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.
Next Story