ಬಾಲಚಂದ್ರ ರಾವ್ ವಾಟೆ
ಪುತ್ತೂರು: ಟೆಕ್ನೋ ಬ್ಯಾಟರಿ ಸಂಸ್ಥೆಯ ಮಾಲಕ ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮದ ಮುಕ್ರಂಪಾಡಿ ನಿವಾಸಿ ಬಾಲಚಂದ್ರ ರಾವ್ ವಾಟೆ(76) ಅಲ್ಪ ಕಾಲದ ಅಸೌಖ್ಯದಿಂದ ಭಾನುವಾರ ಸ್ವಗೃಹದಲ್ಲಿ ನಿಧನರಾದರು.
ಪುತ್ತೂರಿನಲ್ಲಿ ಪ್ರಥಮವಾಗಿ ನೆಹರೂನಗರ ಎಂಬಲ್ಲಿ ಬ್ಯಾಟರಿ ತಯಾರಿ ಸಂಸ್ಥೆ ಸ್ಥಾಪಿಸಿದ ಅವರು ಟೆಕ್ನೋ ಬ್ಯಾಟರಿ ಮತ್ತು ಟೆಕ್ನೋ ಇಂಡಸ್ಟ್ರೀಸ್ನ ಮಾಲಿಕರಾಗಿದ್ದು, ಸುಮಾರು 35 ವರ್ಷಗಳಿಂದ ಈ ಸಂಸ್ಥೆಯನ್ನು ಮುನ್ನಡೆಸುತ್ತಿದ್ದರು.
ಮೃತರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.
Next Story