ಶಬರಿಮಲೆ ಯಾತ್ರೆಯಲ್ಲಿ ಉದ್ಯಾವರದ ಅಯ್ಯಪ್ಪ ಮಾಲಾಧಾರಿ ಮೃತ್ಯು
ಉಡುಪಿ, ಜ.16: ಉದ್ಯಾವರದ ಅಯ್ಯಪ್ಪ ಮಾಲಾಧಾರಿಯೊಬ್ಬರು ಶಬರಿ ಮಲೆ ಯಾತ್ರೆ ಮಧ್ಯೆ ಹೃದಯಾಘಾತದಿಂದ ಮೃತಪಟ್ಟ ಘಟನೆ ಜ.16ರಂದು ನಡೆದಿದೆ.
ಮೃತರನ್ನು ಉದ್ಯಾವರದ ಅಯ್ಯಪ್ಪ ಸ್ವಾಮಿ ಮಂದಿರದ ಸದಸ್ಯ ಸುರೇಶ್ ಬಂಗೇರ ಎಂದು ಗುರುತಿಸಲಾಗಿದೆ. ಇವರು ಜ.14ರಂದು ಉದ್ಯಾವರ ಮಂದಿರದಲ್ಲಿ ಪೂಜೆ ಮುಗಿಸಿ ಸುಮಾರು 14 ಮಂದಿ ಅಯ್ಯಪ್ಪ ಮಾಲಾಧಾರಿ ಳ ಜೊತೆ ಯಾತ್ರೆಗೆ ಹೊರಟಿದ್ದರು.
ಯಾತ್ರೆಯಲ್ಲಿ ಶಬರಿಮಲೆಯ ಗಣೇಶ ಬೆಟ್ಟ ಹತ್ತುವ ವೇಳೆ ಹೃದಯಾಘಾತಕ್ಕೆ ಒಳಗಾದರೆನ್ನಲಾಗಿದೆ. ಕೂಡಲೇ ಇವರನ್ನು ಪಲ್ಲತಿಟ್ಟು ಸರಕಾರಿ ಆಸ್ಪತ್ರೆಗೆ ಕರೆದು ಕೊಂಡು ಬರಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು ಸುರೇಶ್ ಮೃತಪಟ್ಟಿರು ವುದಾಗಿ ತಿಳಿಸಿದರು. ಇವರ ಪಾರ್ಥಿವ ಶರೀರ ಜ.17ರಂದು ಉದ್ಯಾವರಕ್ಕೆ ತಲುಪಲಿದೆ ಎಂದು ತಿಳಿದುಬಂದಿದೆ.
Next Story