ಕ್ಯಾಂಟೀನ್ನಲ್ಲಿ ದಾಂಧಲೆ ನಡೆಸಿ ಮಗನಿಗೆ ಕತ್ತಿಯಿಂದ ಕಡಿದ ತಂದೆ: ಆರೋಪ
ಸುಳ್ಯ : ಮಾನಸಿಕ ಸ್ಥಿಮಿತ ಕಳೆದುಕೊಂಡ ವ್ಯಕ್ತಿಯೋರ್ವರು ಕ್ಯಾಂಟೀನ್ನಲ್ಲಿ ದಾಂಧಲೆ ನಡೆಸಿ ಬಳಿಕ ಮಗನಿಗೆ ಕತ್ತಿಯಿಂದ ಕಡಿದು ಗಾಯಗೊಳಿಸಿದ ಘಟನೆ ಮಂಗಳವಾರ ರಾತ್ರಿ ಎಲಿಮಲೆಯಲ್ಲಿ ನಡೆದಿರುವುದು ವರದಿಯಾಗಿದೆ.
ಎಲಿಮಲೆಯ ರಾಜೇಶ್ (55) ಆರೋಪಿ ಎಂದು ಗುರುತಿಸಲಾಗಿದೆ.
ಈತ ತನ್ನ ಪುತ್ರ ಬಾಲಕೃಷ್ಣ ಎಂಬವರು ಎಲಿಮಲೆಯಲ್ಲಿ ನಡೆಸುತ್ತಿರುವ ಮಿನಿ ಕ್ಯಾಂಟೀನ್ಗೆ ತಡರಾತ್ರಿ ಒಳನುಗ್ಗಿ ಪಾತ್ರೆಗಳನ್ನು ಅಲ್ಲೆ ಪಕ್ಕದಲ್ಲಿದ್ದ ಬಾವಿಗೆ ಎಸೆದಿದ್ದಲ್ಲದೇ, ಗ್ಯಾಸ್ ಸಿಲಿಂಡರನ್ನು ಹೊತ್ತೊಯ್ದು ಎಸೆದು, ಬಳಿಕ ತನ್ನ ಪುತ್ರನ ಕೋಣೆಗೆ ನುಗ್ಗಿ ಕೈಗೆ ಕತ್ತಿಯಿಂದ ಕಡಿದು ಗಾಯಗೊಳಿಸಿದ್ದಾರೆನ್ನಲಾಗಿದೆ.
ಬಳಿಕ ಸ್ಥಳೀಯರು ಸೇರಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾನೆ ಎನ್ನಲಾದ ರಾಜೇಶ್ ನನ್ನು ಮಂಗಳೂರಿನ ಆ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.
ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Next Story