ಅಧಿಕಾರಿಗಳಿಗೆ ಸಂಬಳ ಬರುತ್ತಿರುವುದು ಸರಕಾರದಿಂದಲೋ, ಬಿಜೆಪಿ ಕಚೇರಿಯಿಂದಲೋ: ಪ್ರಿಯಾಂಕ್ ಖರ್ಗೆ ಪ್ರಶ್ನೆ
ಬೆಂಗಳೂರು, ಜ. 20: `ಸರಕಾರಿ ಆಸ್ಪತ್ರೆಯ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ರಾಜ್ಯ ಸರಕಾರದ ಚಿಹ್ನೆಯ ಬದಲು ಬಿಜೆಪಿ ಚಿಹ್ನೆ! ಬಿಜೆಪಿ ಅಧ್ಯಕ್ಷರುಗಳ ಫೋಟೋ! ಸರಕಾರದ ಶಿಷ್ಟಾಚಾರಗಳನ್ನು ಬದಿಗೊತ್ತಿ ಬಿಜೆಪಿಯ ಬ್ಯಾನರ್ ಹಾಕಲು ಅಧಿಕಾರಿಗಳಿಗೆ ಯಾರು ಹೇಳಿದ್ದು?' ಎಂದು ಮಾಜಿ ಸಚಿವ ಹಾಗೂ ಚಿತ್ತಾಪುರ ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಇಂದಿಲ್ಲಿ ಪ್ರಶ್ನಿಸಿದ್ದಾರೆ.
ಗುರುವಾರ ಟ್ವೀಟ್ ಮಾಡಿರುವ ಅವರು, `ಸರಕಾರಿ ಅಧಿಕಾರಿಗಳಿಗೆ ಸಂಬಳ ಬರುತ್ತಿರುವುದು ಸರಕಾರದಿಂದಲೋ? ಅಥವಾ ಬಿಜೆಪಿ ಕಚೇರಿಯಿಂದಲೋ?' ಎಂದು ಪ್ರಶ್ನಿಸಿದ್ದು, ಸರಕಾರಿ ಆಸ್ಪತ್ರೆಯ ಶಂಕುಸ್ಥಾಪನೆ ಕಾರ್ಯಕ್ರಮದ ವಿಡಿಯೋ ಶೇರ್ ಮಾಡಿದ್ದಾರೆ
ಸರ್ಕಾರಿ ಆಸ್ಪತ್ರೆಯ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಚಿಹ್ನೆಯ ಬದಲು ಬಿಜೆಪಿ ಚಿಹ್ನೆ! ಬಿಜೆಪಿ ಅಧ್ಯಕ್ಷರುಗಳ ಫೋಟೋ!
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) January 20, 2022
ಸರ್ಕಾರದ ಶಿಷ್ಟಾಚಾರಗಳನ್ನು ಬದಿಗೊತ್ತಿ ಬಿಜೆಪಿಯ ಬ್ಯಾನರ್ ಹಾಕಲು ಅಧಿಕಾರಿಗಳಿಗೆ ಯಾರು ಹೇಳಿದ್ದು?
ಸರ್ಕಾರಿ ಅಧಿಕಾರಿಗಳಿಗೆ ಸಂಬಳ ಬರುತ್ತಿರುವುದು ಸರ್ಕಾರದಿಂದಲೋ? ಅಥವಾ ಬಿಜೆಪಿ ಕಛೇರಿಯಿಂದಲೋ? pic.twitter.com/UduYyDWLvI