ಉಡುಪಿ ಎಸ್ಡಿಎಂ ಆಯುರ್ವೇದ ಕಾಲೇಜಿನ ಸಾಧನೆ; ಸ್ನಾತಕೋತ್ತರ ವಿಭಾಗದ 8 ವಿದ್ಯಾರ್ಥಿಗಳು ಪ್ರಥಮ ರ್ಯಾಂಕ್
ಉಡುಪಿ, ಜ.22: ಬೆಂಗಳೂರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ 2020-21ರ ಶೈಕ್ಷಣಿಕ ವರ್ಷದಲ್ಲಿ ನಡೆಸಿದ ಸ್ನಾತಕೋತ್ತರ ವಿಭಾಗದ ಅಂತಿಮ ಪರೀಕ್ಷೆಯಲ್ಲಿ ಉಡುಪಿ ಎಸ್ಡಿಎಂ ಆಯುರ್ವೇದ ಕಾಲೇಜಿಗೆ ಒಟ್ಟು 33 ರ್ಯಾಂಕ್ ಗಳು ದೊರೆತಿದ್ದು, ಅದರಲ್ಲಿ 8 ವಿದ್ಯಾರ್ಥಿಗಳು ಪ್ರಥಮ ರ್ಯಾಂಕ್ ಗಳಿಸಿದ್ದಾರೆ.
ರೋಗ ನಿದಾನ ವಿಭಾಗದಲ್ಲಿ 5, ಶಲ್ಯತಂತ್ರ ವಿಭಾಗದಲ್ಲಿ 5, ಮಾನಸರೋಗ 3, ಶರೀರರಚನ 3, ಪ್ರಸೂತಿತಂತ್ರ ಮತ್ತು ಸ್ತ್ರೀರೋಗ 4, ಕೌಮಾರಭೃತ್ಯ 2, ಕಾಯಚಿಕಿತ್ಸಾ 2, ಪಂಚಕರ್ಮ 2, ರಸಶಾಸ್ತ್ರ ಮತ್ತು ಬೈಷಜ್ಯಕಲ್ಪನ 2, ಸ್ವಸ್ಥವೃತ್ತ 2, ಸಂಹಿತ ಮತ್ತು ಸಿದ್ಧಾಂತ, ಅಗದತಂತ್ರ, ದ್ರವ್ಯಗುಣ ವಿಭಾಗದಲ್ಲಿ ತಲಾ ಒಂದರಂತೆ ಒಟ್ಟು 33 ರ್ಯಾಂಕ್ ಗಳನ್ನು ಪಡೆಯುವ ಮೂಲಕ ವಿಶಿಷ್ಟ ಸಾಧನೆ ಯನ್ನು ಮಾಡಿದೆ.
ಕೌಮಾರಭೃತ್ಯ ವಿಭಾಗದಲ್ಲಿ ಡಾ.ರಾಜಶ್ರೀ ಟಿ.ಆರ್., ಮಾನಸ ರೋಗ ವಿಭಾಗದಲ್ಲಿ ಡಾ.ದೀಪಿಕಾ ಪಿ., ಪ್ರಸೂತಿ ತಂತ್ರ ಮತ್ತು ಸ್ತ್ರೀರೋಗ ವಿಭಾಗದಲ್ಲಿ ಡಾ.ರೇಷ್ಮಾ ಸಾಲಿಮನಿ, ರಚನಾ ಶರೀರ ವಿಭಾಗದಲ್ಲಿ ಡಾ.ಕೊಚ್ಚು ತೆರೇಸಾ ಜೋಸೆ, ರೋಗನಿದಾನ ವಿಭಾಗದಲ್ಲಿ ಡಾ.ಅಶ್ವಥಿ ಪಿ.ಎಂ. ಮತ್ತು ಡಾ. ಸಿಲ್ವಿನಿಯಾ ಅನಿತರಾಜ್ ಫೆರ್ನಾಂಡಿಸ್, ಸ್ವಸ್ಥವೃತ್ತ ವಿಭಾಗದಲ್ಲಿ ಡಾ.ಅಪರ್ಣ ಎಸ್., ದ್ರವ್ಯಗುಣ ವಿಭಾಗದಲ್ಲಿ ಡಾ.ಐಸ್ವರ್ಯ ಸಸಿಧರನ್ ಪ್ರಥಮ ರ್ಯಾಂಕ್ ಗಳಿಸಿದ್ದಾರೆ.
ಅದೇ ರೀತಿ ರಾಜ್ಯದ ಸಮಗ್ರ ಆಯುರ್ವೇದ ವಿದ್ಯಾರ್ಥಿಗಳ ಬಿಎಎಂಎಸ್ ಸ್ನಾತಕ ವಾರ್ಷಿಕ ಪರೀಕ್ಷೇಯಲ್ಲಿ ಎಸ್ಡಿಎಂ ಆಯುರ್ವೇದ ಕಾಲೇಜಿನ 4 ವಿದ್ಯಾರ್ಥಿಗಳು ರ್ಯಾಂಕ್ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ. ರಾಜೇಶ್ವರಿ ಎಸ್.ಆಚಾರ್ಯ 2ನೆ ರ್ಯಾಂಕ್, ಶುಭ ಎಸ್.ಭಟ್4ನೇ ರ್ಯಾಂಕ್, ನೇಹಾ ಆರ್.ಪಾಟೀಲ್ 7ನೆ ರ್ಯಾಂಕ್, ರಮ್ಯ ಎಸ್. 8ನೆ ರ್ಯಾಂಕ್ ಗಳಿಸಿದ್ದಾರೆ.
ಈ ಸಾಧನೆಗಾಗಿ ಉಜಿರೆ ಎಸ್ಡಿಎಂ ಎಜ್ಯುಕೇಶನಲ್ ಸೊಸಾಟಿ ಅಧ್ಯಕ್ಷ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಸಂಸ್ಥೆಯ ಉಪಾಧ್ಯಕ್ಷರು, ಕಾರ್ಯದರ್ಶಿ ಯವರು, ಕಾಲೇಜಿನ ಪ್ರಾಂಶುಪಾಲರು ಹಾಗೂ ಅಧ್ಯಾಪಕ ವೃಂದದವರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.