ಸಹಕಾರಿ ಬ್ಯಾಂಕ್ ಗ್ರಾಮೀಣ ಭಾಗದ ಕಟ್ಟಕಡೆಯ ವ್ಯಕ್ತಿಯನ್ನು ತಲುಪುವಲ್ಲಿ ಯಶಸ್ವಿಯಾಗಿದೆ: ರಾಜೇಂದ್ರ ಕುಮಾರ್
ಕಾರ್ಕಳ : ಸಹಕಾರಿ ಬ್ಯಾಂಕ್ ಗ್ರಾಮೀಣ ಭಾಗದ ಕಟ್ಟಕಡೆಯ ವ್ಯಕ್ತಿಯನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ ಆರ್ಥಿಕ ಧೃಢತೆ ಹೆಚ್ಚಿಸಿದೆ ಎಂದು ಎಸ್ ಸಿ ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷ ಎಂ ಎನ್ ರಾಜೇಂದ್ರ ಕುಮಾರ್ ಹೇಳಿದರು.
ಅವರು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ ಇದರ ಬೈಲೂರು ಶಾಖೆಯ ಸ್ಥಳಾಂತರ ಸಮಾರಂಭ ಹಾಗು ಬೈಲೂರು ವಿಭಾಗದ ನವೋದಯ ಸ್ವ ಸಹಾಯ ಸಂಘಗಳ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
ಸ್ಥಳಾಂತರ ಬೈಲೂರು ಶಾಖೆಯ ಯನ್ನು ಉದ್ಘಾಟಿಸಿ ಮಾತನಾಡಿದ ಇಂಧನ ಹಾಗು ಕನ್ನಡ ಸಂಸ್ಕೃತಿ ಖಾತೆ ಸಚಿವ ವಿ ಸುನೀಲ್ ಕುಮಾರ್, ಸಹಕಾರಿ ಕ್ಷೇತ್ರವು ಎಲ್ಲಾ ಜನರನ್ನು ತಲುಪಿದ್ದು ರೈತರ ಸಬಲೀಕರಣ ದೊಡ್ಡ ಪ್ರಮಾಣದಲ್ಲಿ ನಡೆದಿದೆ. ರಾಷ್ಟ್ರೀಕೃತ ಬ್ಯಾಂಕ್ ಗಳು ಗ್ರಾಮೀಣ ಜನರ ನಿರ್ಲಕ್ಷಿಸಿದ ಕಾರಣ ಸಹಕಾರಿ ಬ್ಯಾಂಕ್ ಗಳ ಸವಲತ್ತು ವಿತರಣೆಯಲ್ಲಿ ರೈತರ ಮನಗೆದ್ದಿದೆ. ಜಿಲ್ಲಾ ಸಹಕಾರಿ ಬ್ಯಾಂಕ್ 25 ಶಾಖೆಗಳಿಂದ 108 ಶಾಖೆಗಳಿಗೆ ವಿಸ್ತರಿಸಿದೆ. ನವೋದಯವು ಆರ್ಥೀಕ ಪುನಶ್ಚೇತನ ಸಬಲೀಕರಣ ಮಾಡಿದುದರಿಂದಾಗಿ 7 ಲಕ್ಷ ಜನರು ಪ್ರಾಯೋಜನ ಪಡೆಯುವಂತಾಗಿದೆ. ದೇಶದಲ್ಲಿ ಸಹಕಾರ ಕ್ಷೇತ್ರವು ಬೃಹತ್ ಮಟ್ಟದಲ್ಲಿ ಬೆಳೆದಿದ್ದರು ಸಹಕಾರ ಸಚಿವಾಲಯವು ಪ್ರತ್ಯೇಕವಾಗಿರಲಿಲ್ಲ. ಈಗ ಕೇಂದ್ರ ಸರಕಾರವು ಸಹಕಾರಿ ಸಚಿವಾಲಯ ಆರಂಭಿಸಿದೆ ಎಂದರು.
ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಹಾಗು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಅಂಗಾರ ಮಾತನಾಡಿದರು. ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ನವೋದಯ ಸಮಾವೇಶ ಉಧ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನ ಮುಖ್ಯ ಕರ್ಯನಿರ್ವಾಹಣಾಧಿಕಾರಿ ಸಿ.ಎನ್ ದೇವರಾಜ್, ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ , ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ. ರವಿರಾಜ್ ಹೆಗ್ಡೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಬಿ.ಜಯಕರ್ ಶೆಟ್ಟಿ ಇಂದ್ರಾಳಿ, ದ.ಕ ಹಾಗು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ, ಬೈಲೂರು ಕೆ.ಎಸ್ ಹೆಗ್ಡೆ ಆಸ್ಪತ್ರೆ ದಿನೇಶಚಂದ್ರ ಹೆಗ್ಡೆ , ನೀರೆ ಬೈಲೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನೀರೆ ರವೀಂದ್ರ ನಾಯಕ್ , ಕೌಡೂರು ಗ್ರಾ.ಪಂ ಅಧ್ಯಕ್ಷ ಜಗದೀಶ್ ಪೂಜಾರಿ, ಶಾಖ ಕಟ್ಟಡ ಮಾಲಕ ರಾಮಕೃಷ್ಣ ಶೆಟ್ಟಿ , ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ , ಬ್ಯಾಂಕ್ ನಿರ್ದೇಶಕ ಭಾಸ್ಕರ್ ಎಸ್ ಕೋಟ್ಯಾನ್ ಭಾಗವಹಿದ್ದರು ನೀರೆ ಗ್ರಾಪಂ ಅಧ್ಯಕ್ಷೆ ಶಾಲಿನಿ .ಕಾರ್ಕಳ ತಾ.ಕೃಷಿಪತ್ತಿನ ಸಂಘಗಳ ನಿರ್ದೇಶಕರು ಉಪಸ್ಥಿತರಿದ್ದರು .
ಇದೇ ಸಂದರ್ಭದಲ್ಲಿ ಥಾಮಸ್ ಡಿಮೆಲ್ಲೊ ರವರಿಗೆ ಠೇವಣಿ ಪತ್ರ, ಗಣೇಶ್ ಜಾರ್ಕಳ ಗೃಹಸಾಲಪತ್ರ, ನೀರೆ ಯವರಿಗೆ ಲಾಕರ್ ಕೀಯನ್ನು ವಿತರಿಸಲಾಯಿತು. ಕಣಜಾರಿನ ಬ್ರಾಹ್ಮರಿ , ನಂದಿನಿ ,ಸ್ವಸಹಾಯ ಸಂಘಗಳಿಗೆ ಚಾಲನೆ ನೀಡಲಾಯಿತು.
ಮೆರವಣಿಗೆ: ಶಾಖೆ ಕಟ್ಟಡ ಉದ್ಘಾಟಿಸಿದ ಸಚಿವರು ಹಾಗು ಅತಿಥಿಗಳನ್ನು ಕೊಂಬುವಾದನ ಕೇರಳ ಚೆಂಡೆ, ಕೀಲುಕುದುರೆ ತಂಡಗಳು, ಕರಗ ಮೂಲಕ ಸ್ವಸಹಾಯ ಸಂಘಗಳ ಸದಸ್ಯರಿಮದ ಪೂರ್ಣಕುಂಭ ಸ್ವಾಗತಿಸಲಾಯಿತು.
ಸನ್ಮಾನ : ಇದೇ ಸಂದರ್ಭದಲ್ಲಿ ಬ್ಯಾಂಕ್ ಅಧ್ಯಕ್ಷ ಎಂ.ಎನ್ .ರಾಜೇಂದ್ರ ಕುಮಾರ್, ಸುಧೀರ್ ಕುಮಾರ್ ಹೆಗ್ಡೆ, ರಾಮಕೃಷ್ಣ ಶೆಟ್ಟಿ ಯವರನ್ನು ಸನ್ಮಾನಿಸಲಾಯಿತು.
ಸುರೇಶ್ ಸಾಲಿಯಾನ್ ಪ್ರಾರ್ಥಿಸಿದರು, ಬೆಳಪು ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಅಜಿತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು .