ರಾಷ್ಟ್ರಮಟ್ಟದ ಸಾಂಸ್ಕೃತಿಕ ಸ್ಪರ್ಧೆ: ವಿಬಿಸಿಎಲ್ ದ್ವಿತೀಯ
ಉಡುಪಿ : ಮೂಡಬಿದರೆಯ ಆಳ್ವಾಸ್ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಮಟ್ಟದ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಗಳಿಸಿದ್ದಾರೆ.
ವೈಯಕ್ತಿಕ ಸ್ಪರ್ಧೆಗಳಾದ ಪೋಸ್ಟರ್ ಮೇಕಿಂಗ್, ಕನ್ನಡ ಚರ್ಚಾ ಸ್ಪರ್ಧೆ, ಬಜೆಟ್ ತಯಾರಿಕೆಯಲ್ಲಿ ಪ್ರಥಮ ಸ್ಥಾನ ಗಳಿಸಿರುವ ವಿಬಿಸಿಎಲ್ನ ವಿದ್ಯಾರ್ಥಿಗಳು ಇಂಗ್ಲೀಷ್ ಚರ್ಚಾ ಸ್ಪರ್ಧೆ ಮತ್ತು ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೇ ಸರ್ಪ್ರೈಸ್ ಇವೇಂಟ್, ಅಣಕು ಮಾಧ್ಯಮ, ಫೇಸ್ ಪೈಟಿಂಗ್ನಲ್ಲಿ ಇವರು ಬಹುಮಾನಗಳನ್ನು ಪಡೆದಿದ್ದಾರೆ.
ಚಿತ್ರದಲ್ಲಿ ಬಹುಮಾನಿತ ತಂಡದೊಂದಿಗೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.(ಡಾ.) ನಿರ್ಮಲ ಕುಮಾರಿ ಕೆ ಹಾಗೂ ಸಾಂಸ್ಕೃತಿಕ ತಂಡದ ಸಂಯೋಜಕಿ ಪ್ರೀತಿ ಹರೀಶ್ ರಾಜ್ ಹಾಗೂ ಕ್ವಿಜ್ ಹಾಗೂ ಡಿಬೆಟ್ ತಂಡದ ಸಂಯೋಜಕಿ ಜಯಮೋಲ್ ಪಿ.ಎಸ್ ಇದ್ದಾರೆ.
Next Story