ಭಾರತದಲ್ಲಿ ಆಹಾರ ಸಬ್ಸಿಡಿ
2022-23ರ ಸಾಲಿಗೆ ಆಹಾರ ಸಬ್ಸಿಡಿಗಾಗಿ ಕೇಂದ್ರವು 2.06 ಲಕ್ಷ ಕೋಟಿ ರೂಪಾಯಿಯನ್ನು ಒದಗಿಸಿದೆ. ಇದು ಪಿಡಿಎಸ್ನ ಉಸ್ತುವಾರಿ ಹೊಂದಿರುವ ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆಯ ಬಜೆಟ್ನ 97ಶೇ. ಆಗಿದೆ. ಇದು ಹಾಲಿ ಹಣಕಾಸು ವರ್ಷದ ಅಂದಾಜು ವೆಚ್ಚ (2.9 ಲಕ್ಷ ಕೋಟಿ ರೂಪಾಯಿ)ಕ್ಕಿಂತ 28ಶೇ. ಕಡಿಮೆಯಾಗಿದೆ. ಇದು, ಅಂತಿಮವಾಗಿ, 2020-21ರಲ್ಲಿ ಖರ್ಚು ಮಾಡಲಾದ ಮೊತ್ತ (5.41 ಲಕ್ಷ ಕೋಟಿ ರೂಪಾಯಿ)ಕ್ಕಿಂತ 47ಶೇ. ದಷ್ಟು ಕಡಿಮೆಯಾಗಿದೆ.
ಕೇಂದ್ರ ಸರಕಾರವು ತನ್ನ 2022-23ನೇ ಸಾಲಿನ ಒಟ್ಟು ಬಜೆಟ್ನ 5.2 ಶೇಕಡ ದಷ್ಟನ್ನು ಆಹಾರ ಸಬ್ಸಿಡಿ ಕಾರ್ಯಕ್ರಮಕ್ಕೆ ಒದಗಿಸಿದೆ. ಆಹಾರ ಸಬ್ಸಿಡಿ ಕಾರ್ಯಕ್ರಮವು ಮಾರುಕಟ್ಟೆಯಲ್ಲಿ ಬೆಲೆಗಳು ಕುಸಿದಾಗ ರೈತರನ್ನು ರಕ್ಷಿಸುತ್ತದೆ ಹಾಗೂ ಬಳಕೆದಾರರಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್ಯ ಮೂಲಕ ಮಿತದರದಲ್ಲಿ ಆಹಾರ ಧಾನ್ಯಗಳನ್ನು ಪೂರೈಸುತ್ತದೆ.
IndiaSpend ಆದರೆ, ಅಪರಿಪೂರ್ಣ ವ್ಯಾಪ್ತಿ ಮತ್ತು ಸೋರಿಕೆಗಾಗಿ ಈ ಕಾರ್ಯಕ್ರಮವು ಟೀಕೆಗಳನ್ನೂ ಎದುರಿಸುತ್ತಿದೆ. ಆಹಾರ ಸಬ್ಸಿಡಿ ಕಾರ್ಯಕ್ರಮವನ್ನು ಇನ್ನಷ್ಟು ಸುಧಾರಿ ಸುವ ಅಗತ್ಯವಿದೆ ಎಂಬುದಾಗಿ ನೊಂದಿಗೆ ಮಾತನಾಡಿದ ಪರಿಣತರು ಹೇಳುತ್ತಾರೆ. ಆಹಾರ ಸಬ್ಸಿಡಿ ಕಾರ್ಯಕ್ರಮವು ಎಲ್ಲಿ ಎಡವಿದೆ ಹಾಗೂ ಫಲಾನುಭವಿಗಳಿಗೆ ಅದು ಹೆಚ್ಚು ಉಪಯುಕ್ತವಾಗಲು ಏನು ಮಾಡಬೇಕು ಎಂಬುದನ್ನು ಇಲ್ಲಿ ಚರ್ಚಿಸಲಾಗಿದೆ.
ಆಹಾರ ಸಬ್ಸಿಡಿ ಹೇಗೆ ಕೆಲಸ ಮಾಡುತ್ತದೆ?
ಆಹಾರ ಸಬ್ಸಿಡಿ ಎನ್ನುವುದು ಬಳಕೆದಾರ ಮತ್ತು ಉತ್ಪಾದಕ- ಇಬ್ಬರಿಗೂ ನೀಡುವ ಸಬ್ಸಿಡಿಯಾಗಿದೆ. ಕೃಷಿಯು ಲಾಭದಾಯಕ ಎನಿಸುವ ಬೆಲೆಯಲ್ಲಿ ರೈತರಿಂದ ಧಾನ್ಯಗಳನ್ನು ಖರೀದಿಸಲು ಹಾಗೂ ಬಡ ಕುಟುಂಬಗಳಿಗೆ ಕಡಿಮೆ ಬೆಲೆಯಲ್ಲಿ ಅಥವಾ ಕೆಲವು ಪ್ರಕರಣಗಳಲ್ಲಿ ಉಚಿತವಾಗಿ ಮಾರಾಟ ಮಾಡಲು ಈ ಕಾರ್ಯಕ್ರಮವನ್ನು ಬಳಸಲಾಗುತ್ತದೆ. ಸಬ್ಸಿಡಿಯ ಒಂದು ಭಾಗವನ್ನು ನಿರ್ವಹಣೆ ಮತ್ತು ಇತರ ಆಡಳಿತಾತ್ಮಕ ವೆಚ್ಚಗಳಿಗಾಗಿ ಬಳಸಲಾಗುತ್ತದೆ.ಪಿಡಿಎಸ್ ಅಡಿಯಲ್ಲಿ ವಿತರಣೆಗಾಗಿ ಕೇಂದ್ರ ಮತ್ತು ರಾಜ್ಯಗಳೆರಡೂ ಆಹಾರ ಧಾನ್ಯಗಳನ್ನು ಖರೀದಿಸುತ್ತವೆ. ಕೇಂದ್ರ ಸರಕಾರವು ‘ಕೇಂದ್ರೀಕೃತ ಸಂಗ್ರಹಣೆ’ಯಡಿ ಭಾರತೀಯ ಆಹಾರ ನಿಗಮ (ಎಫ್ಸಿಐ)ದ ಮೂಲಕ ಧಾನ್ಯಗಳನ್ನು ಖರೀದಿಸಿದರೆ, ರಾಜ್ಯಗಳ ಸಂಸ್ಥೆಗಳು ‘ವಿಕೇಂದ್ರೀಕೃತ ಸಂಗ್ರಹಣೆ’ಯ ಭಾಗವಾಗಿ ಖರೀದಿಸುತ್ತವೆ.
ಕೇಂದ್ರೀಕೃತ ಸಂಗ್ರಹಣೆಯಡಿ ಭಾರತೀಯ ಆಹಾರ ನಿಗಮವು ಅಕ್ಕಿ ಮತ್ತು ಗೋಧಿಯನ್ನು ರೈತರಿಂದ ಕನಿಷ್ಠ ಬೆಂಬಲ ಬೆಲೆ (ಎಮ್ಎಸ್ಪಿ)ಯಡಿ ಖರೀದಿಸುತ್ತದೆ ಹಾಗೂ ಕೇಂದ್ರೀಯ ನೀಡಿಕೆ ಬೆಲೆ (ಸಿಐಪಿ)ಯಲ್ಲಿ (ಸರಕಾರ ನಿಗದಿಪಡಿಸುವ ಕಡಿಮೆ ಬೆಲೆ; ಅದು ಎಮ್ಎಸ್ಪಿಗಿಂತ ಕಡಿಮೆಯಾಗಿರಬೇಕು) ಪಿಡಿಎಸ್ ಅಂಗಡಿಗಳ ಮೂಲಕ ಮಾರಾಟ ಮಾಡುತ್ತದೆ. ಈ ಧಾನ್ಯಗಳ ಪೈಕಿ ಕೆಲವನ್ನು ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮ ಮತ್ತು ಹದಿಹರೆಯದ ಬಾಲಕಿಯರ ಯೋಜನೆ ಸೇರಿದಂತೆ ಕಲ್ಯಾಣ ಯೋಜನೆಗಳಿಗಾಗಿ ಮತ್ತು ಸಶಸ್ತ್ರ ಪಡೆಗಳಿಗೆ ಆಹಾರ ಧಾನ್ಯಗಳನ್ನು ಪೂರೈಸುವುದಕ್ಕಾಗಿ ಬಳಸಿಕೊಳ್ಳಲಾಗುತ್ತದೆ. ಅದೂ ಅಲ್ಲದೆ, ಸ್ವಲ್ಪ ಭಾಗವನ್ನು ಕೊರತೆ ಋತುಗಳಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಕೆಲವು ರಾಜ್ಯಗಳಲ್ಲಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಒದಗಿಸುವ ಪರೋಪಕಾರಿ ಸಂಸ್ಥೆ ಅಕ್ಷಯ ಪಾತ್ರೆ ಫೌಂಡೇಶನ್ಗೂ ಎಫ್ಸಿಐ ಅಕ್ಕಿ ಪೂರೈಸುತ್ತದೆ.ಸಿಐಪಿಯು ಎಮ್ಎಸ್ಪಿಗಿಂತ ಕಡಿಮೆಯಾಗಿರುವುದರಿಂದ, ಅದರ ವ್ಯತ್ಯಾಸವನ್ನು ಆಹಾರ ಸಬ್ಸಿಡಿ ಕಾರ್ಯಕ್ರಮವು ಭರಿಸುತ್ತದೆ. ಈ ಸಬ್ಸಿಡಿಯನ್ನು ಪ್ರತಿ ವರ್ಷ ಎಫ್ಸಿಐಗೆ ಪಾವತಿಸಲಾಗುತ್ತದೆ.
1964ರ ಭಾರತೀಯ ಆಹಾರ ನಿಗಮ ಕಾಯ್ದೆಯಡಿ, ಆಹಾರ ಧಾನ್ಯಗಳು ಮತ್ತು ಇತರ ಆಹಾರ ಪದಾರ್ಥಗಳ ಖರೀದಿ, ದಾಸ್ತಾನು, ಸಾಗಾಟ, ವಿತರಣೆ ಮತ್ತು ಮಾರಾಟಕ್ಕಾಗಿ ಶಾಸನಾತ್ಮಕ ಸಂಸ್ಥೆ ಭಾರತೀಯ ಆಹಾರ ನಿಗಮವನ್ನು ಸ್ಥಾಪಿಸಲಾಗಿದೆ. ಅದು ಸರಕಾರದಿಂದ ನೇರವಾಗಿ ಹಣವನ್ನು ಪಡೆಯುವುದರ ಜೊತೆಗೆ, ಹಿಂದೆ ರಾಷ್ಟ್ರೀಯ ಸಣ್ಣ ಉಳಿತಾಯ ನಿಧಿ (ಎನ್ಎಸ್ಎಸ್ಎಫ್) ಮತ್ತು ಬ್ಯಾಂಕ್ಗಳಿಂದ ಸಾಲಗಳನ್ನು ಪಡೆಯುವ ಮೂಲಕ ಮತ್ತು ಬಾಂಡ್ಗಳ ಮಾರಾಟದ ಮೂಲಕ ಹಣ ಸಂಗ್ರಹಿಸುತ್ತಿವೆ.
2013ರಲ್ಲಿ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ ಜಾರಿಯಾಗುವುದಕ್ಕೆ ಮುನ್ನ, ಪಿಡಿಎಸ್ ಎನ್ನುವುದು ಆಡಳಿತಾತ್ಮಕ ಯೋಜನೆಯಾಗಿತ್ತು ಎಂದು ಯೋಜನಾ ಆಯೋಗದ ಮಾಜಿ ಸದಸ್ಯ ಎನ್.ಸಿ. ಸಕ್ಸೇನ ಹೇಳುತ್ತಾರೆ. ಎನ್ಎಫ್ಎಸ್ಎ ಫಲಾನುಭವಿಗಳಿಗೆ ಕಾನೂನಾತ್ಮಕ ಹಕ್ಕುಗಳನ್ನು ನೀಡಿತು ಹಾಗೂ ಫಲಾನುಭವಿಗಳ ಸಂಖ್ಯೆಯನ್ನು ಹಿಂದಿನ ಶೇ.25-30 (ಜನಸಂಖ್ಯೆಯ)ದಿಂದ ಶೇ.67ಕ್ಕೆ ಹೆಚ್ಚಿಸಿತು. ಅದೂ ಅಲ್ಲದೆ, ಹಿಂದಿಗಿಂತ ಹೆಚ್ಚಿನ ಧಾನ್ಯಗಳನ್ನು ಅದು ಫಲಾನುಭವಿಗಳಿಗೆ ವಿತರಿಸಿತು. 1997ರಲ್ಲಿ 1.7 ಕೋಟಿ ಟನ್ ಧಾನ್ಯಗಳನ್ನು ವಿತರಿಸಿದ್ದರೆ, 2020ರಲ್ಲಿ 6-9 ಕೋಟಿ ಟನ್ ಧಾನ್ಯಗಳನ್ನು ವಿತರಿಸಲಾಯಿತು.ವೆಚ್ಚದ ಆಧಾರದಲ್ಲಿ, ಪಿಡಿಎಸ್ ದೇಶದ ಅತಿ ದೊಡ್ಡ ಕಲ್ಯಾಣ ಕಾರ್ಯಕ್ರಮ ಗಳ ಪೈಕಿ ಒಂದಾಗಿದೆ. ಈ ಮೊದಲೇ ಹೇಳಿರುವಂತೆ, ಒಟ್ಟು ಬಜೆಟ್ ವೆಚ್ಚದ ಶೇ.5.2 ಭಾಗವನ್ನು ಆಹಾರ ಸಬ್ಸಿಡಿಗಳಿಗಾಗಿ ಒದಗಿಸಲಾಗಿದೆ. ರಕ್ಷಣೆ, ಸಾರಿಗೆ, ರಾಜ್ಯಗಳಿಗೆ ಹಣ ವರ್ಗಾವಣೆ ಮತ್ತು ಪಿಂಚಣಿಗಳ ಬಳಿಕ, ಸರಕಾರ ಮಾಡುವ ಅತಿ ಹೆಚ್ಚಿನ ವೆಚ್ಚಗಳಲ್ಲಿ ಪಿಡಿಎಸ್ ಐದನೆಯದಾಗಿದೆ. ಅದು 90.3 ಕೋಟಿ ಜನ ರಿಗೆ (2020ರ ಜನಸಂಖ್ಯೆಯ ಶೇ.67) ಧಾನ್ಯಗನ್ನು ಪೂರೈಸುವ ಗುರಿ ಹೊಂದಿದೆ.
ಬಜೆಟ್ ಅನುದಾನ
2022-23ರ ಸಾಲಿಗೆ ಆಹಾರ ಸಬ್ಸಿಡಿಗಾಗಿ ಕೇಂದ್ರವು 2.06 ಲಕ್ಷ ಕೋಟಿ ರೂ.ಯನ್ನು ಒದಗಿಸಿದೆ. ಇದು ಪಿಡಿಎಸ್ನ ಉಸ್ತುವಾರಿ ಹೊಂದಿರುವ ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆಯ ಬಜೆಟ್ನ ಶೇ.97 ಆಗಿದೆ. ಇದು ಹಾಲಿ ಹಣಕಾಸು ವರ್ಷದ ಅಂದಾಜು ವೆಚ್ಚ (2.9 ಲಕ್ಷ ಕೋಟಿ ರೂಪಾಯಿ)ಕ್ಕಿಂತ ಶೇ.28 ಕಡಿಮೆಯಾಗಿದೆ. ಇದು, ಅಂತಿಮವಾಗಿ, 2020-21ರಲ್ಲಿ ಖರ್ಚು ಮಾಡಲಾದ ಮೊತ್ತ (5.41 ಲಕ್ಷ ಕೋಟಿ ರೂಪಾಯಿ)ಕ್ಕಿಂತ ಶೇ.47ರಷ್ಟು ಕಡಿಮೆಯಾಗಿದೆ.2016ರಲ್ಲಿ ರಾಷ್ಟ್ರೀಯ ಸಣ್ಣ ಉಳಿತಾಯ ನಿಧಿಯಿಂದ ಭಾರತೀಯ ಆಹಾರ ನಿಗಮ ಪಡೆದುಕೊಂಡ ಸಾಲಗಳನ್ನು ಸರಕಾರ ಮರು ಪಾವತಿಸಿರುವುದು ಈ ಕೊರತೆಗೆ ಕಾರಣವಾಗಿದೆ.
ತನ್ನದೇ ಆದ ಯಾವುದೇ ಆದಾಯ ಎಫ್ಸಿಐಗೆ ಇಲ್ಲದಿರುವುದರಿಂದ, ಅದು ಸಂಪೂರ್ಣವಾಗಿ ಆಹಾರ ಸಬ್ಸಿಡಿಯನ್ನೇ ಅವಲಂಬಿಸಿದೆ. ಎಫ್ಸಿಐಯು ಕ್ಯಾಶ್ ಕ್ರೆಡಿಟ್ ಲಿಮಿಟ್ಗಳು ಮತ್ತು ಕಿರು ಅವಧಿ ಸಾಲಗಳ ಮೂಲಕ ಬ್ಯಾಂಕ್ಗಳಿಂದ ಸಾಲ ಪಡೆದಿದೆ ಎನ್ನುವುದನ್ನು ಅದರ ವೆಬ್ಸೈಟ್ನಲ್ಲಿರುವ ಆರ್ಥಿಕ ವರದಿಗಳು ಹೇಳುತ್ತವೆ. ಅದೂ ಅಲ್ಲದೆ, ಬಾಂಡ್ಗಳನ್ನು ಮಾರಾಟ ಮಾಡುವ ಮೂಲಕ ಮತ್ತು ಎನ್ಎಸ್ಎಸ್ಎಫ್ನಿಂದ ಹಣ ಪಡೆದಿದೆ. ಈ ಸಾಲವು ಸರಕಾರದ ಆಯವ್ಯಯ ಪಟ್ಟಿಯಲ್ಲಿ ಇಲ್ಲದೆ ಇರುವುದರಿಂದ, ವಿತ್ತೀಯ ಕೊರತೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸರಕಾರಕ್ಕೆ ಸಾಧ್ಯವಾಗಿದೆ. ಜನವರಿ 31ರ ವೇಳೆಗೆ, ಎಫ್ಸಿಐಯು 47,649 ಕೋಟಿ ರೂಪಾಯಿ ಸಾಲವನ್ನು ಹೊಂದಿದೆ. ಈ ಪೈಕಿ ಗರಿಷ್ಠ ಹಣವನ್ನು (45,000 ಕೋಟಿ ರೂಪಾಯಿ)ವನ್ನು ಅದು ಬಾಂಡ್ಗಳ ಮಾರಾಟದಿಂದ ಪಡೆದುಕೊಂಡಿದೆ.
ಅಂತ್ಯೋದಯ ಅನ್ನ ಯೋಜನೆ ಅಂತ್ಯೋದಯ ಅನ್ನ ಯೋಜನೆ (ಎಎವೈ)ಯಡಿ ರಾಜ್ಯವೊಂದರಲ್ಲಿ ಬಡತನ ರೇಖೆಗಿಂತ ಕೆಳಗೆ ಜೀವಿಸುವವರಲ್ಲೇ ಅತ್ಯಂತ ಬಡ ಕುಟುಂಬಗಳಿಗೆ ತಿಂಗಳಿಗೆ 35 ಕೆಜಿ ಆಹಾರ ಧಾನ್ಯ ನೀಡಲಾಗುತ್ತದೆ. ಆದ್ಯತಾ ಕುಟುಂಬಗಳಿಗೆ (ಅಂತ್ಯೋದಯ ಅನ್ನ ಯೋಜನೆಗೆ ಸೇರ್ಪಡೆಗೊಳ್ಳದ ಕಡು ಬಡವ ಕುಟುಂಬ ಗಳು) ತಿಂಗಳಿಗೆ ಪ್ರತಿ ಕುಟುಂಬ ಸದಸ್ಯರಿಗೆ 5 ಕೆಜಿಯಂತೆ ಧಾನ್ಯ ನೀಡಲಾಗುತ್ತದೆ. ಅವರಿಗೆ ರಿಯಾಯಿತಿ ದರದಲ್ಲಿ ಕೆಜಿಗೆ 2 ರೂ.ಯಂತೆ ಗೋಧಿ ಮತ್ತು ಕೆಜಿಗೆ 3 ರೂಪಾಯಿಯಂತೆ ಅಕ್ಕಿಯನ್ನು ಮಾರಾಟ ಮಾಡಲಾಗುತ್ತದೆ.
IndiaSpend ‘ಸೋರಿಕೆ’ಯು ಪಿಡಿಎಸ್ ವ್ಯವಸ್ಥೆಯನ್ನು ಕಾಡುತ್ತಿದೆ. ಒಟ್ಟು ಧಾನ್ಯದ ಸುಮಾರು ಶೇ.47 ಸೋರಿಕೆಯಾಗುತ್ತದೆ ಎಂಬುದಾಗಿ ಅಂದಾಜಿಸಲಾಗಿದೆ. ಸೋರಿಕೆಯ ಪ್ರಮಾಣ 2004ರ ಬಳಿಕ ಹೆಚ್ಚಿದೆ. ಅದಕ್ಷತೆ ಮತ್ತು ಸೋರಿಕೆಯನ್ನು ನಿವಾರಿಸುವುದಕ್ಕಾಗಿ ಸರಕಾರವು ರೇಶನ್ ಕಾರ್ಡ್ಗಳನ್ನು ಆಧಾರ್ಗೆ ಜೋಡಿಸಿದೆ. 2018ರಲ್ಲಿ ವರದಿ ಮಾಡಿರುವಂತೆ, ಈ ಕ್ರಮದ ಪ್ರಯೋಜನಗಳು ಸ್ಪಷ್ಟವಾಗಿಲ್ಲ. ಆಧಾರ್ ಗುರುತು ಪತ್ತೆ ಪ್ರಕ್ರಿಯೆಯ ದೋಷಗಳಿಂದಾಗಿ ಹಲವರಿಗೆ ರೇಶನ್ ನಿರಾಕರಿಸಲಾಯಿತು. 2018ರಲ್ಲಿ ರೇಶನ್ ನಿರಾಕರಿಸಲ್ಪಟ್ಟ ಕಾರಣಕ್ಕಾಗಿ 14 ಸಾವುಗಳು ಸಂಭವಿಸಿದವು. ಈ ಪೈಕಿ ಏಳು ಮಂದಿ ಆಧಾರ್ ಗುರುತು ಪತ್ತೆಯ ದೋಷದಿಂದಾಗಿ ರೇಶನ್ ನಿರಾಕರಿಸಲ್ಪಟ್ಟವರು.ಈಗಿನ ಪಿಡಿಎಸ್ ವ್ಯವಸ್ಥೆಯಲ್ಲಿ ಕೇವಲ ಧಾನ್ಯಗಳಿಗೆ ಸಬ್ಸಿಡಿಗಳನ್ನು ನೀಡಲಾ ಗುತ್ತಿದೆ. ಎಫ್ಸಿಐಯು ಅಕ್ಕಿ ಮತ್ತು ಗೋಧಿಯನ್ನು ಮಾತ್ರ ಸಂಗ್ರಹಿಸುತ್ತದೆ.
‘‘ಕೆಲವು ರಾಜ್ಯಗಳು ಮಧ್ಯಾಹ್ನದ ಊಟದಲ್ಲಿ ರಾಗಿ ಕೊಡುತ್ತವೆ. ಕೇಂದ್ರ ಸರಕಾರವು ಕೋವಿಡ್ ಸಂದರ್ಭದಲ್ಲಿ ದ್ವಿದಳ ಧಾನ್ಯಗಳನ್ನು ಒದಗಿಸಿದೆ. ಅಂತ್ಯೋದಯ ಕಾರ್ಡ್ದಾರರಿಗಾದರೂ ದ್ವಿದಳ ಧಾನ್ಯಗಳನ್ನು ಸುಲಭ ವಾಗಿ ಒದಗಿಸಬಹುದಾಗಿದೆ ಎಂದು ಅರ್ಥಶಾಸ್ತ್ರಜ್ಞ ಹಾಗೂ ರಾಂಚಿ ವಿಶ್ವವಿದ್ಯಾನಿ ಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿರುವ ಜೀನ್ ಡ್ರೇಝ್ ಹೇಳುತ್ತಾರೆ.
‘‘ರಾಗಿ ಮುಂತಾದ ಇತರ ಧಾನ್ಯಗಳನ್ನು ದೀರ್ಘಾವಧಿಗೆ ಸಂಗ್ರಹಿಸಿಡಲು ಸಾಧ್ಯವಿಲ್ಲ. ಅದೂ ಅಲ್ಲದೆ, ನಾವು ರಾಗಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವುದಿಲ್ಲ. ದ್ವಿದಳ ಧಾನ್ಯಗಳನ್ನೂ ಆಮದು ಮಾಡಲಾಗುತ್ತಿದೆ. ಹಾಗಾಗಿ, ಅವುಗಳನ್ನು ಎಫ್ಸಿಐ ಮೂಲಕ ನೀಡಲು ಸಾಧ್ಯವಿಲ್ಲ’’ ಎಂದು ಯೋಜನಾ ಆಯೋಗದ ಮಾಜಿ ಸದಸ್ಯ ಸಕ್ಸೇನ ಹೇಳುತ್ತಾರೆ. ‘‘ಆದರೆ, ಖಂಡಿತವಾಗಿಯೂ ಅವುಗಳನ್ನು ಪಿಡಿಎಸ್ಗೆ ಸೇರ್ಪಡೆಗೊಳಿಸಬೇಕು’’ ಎಂದು ಅವರು ಹೇಳಿದರು.
ಕೃಪೆ: indiaspend