ಕಾವೂರು ವಾರ್ಡ್ 18ರಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರಿಂದ ಶಿಲಾನ್ಯಾಸ
ಮಂಗಳೂರು, ಮೇ 2: ನಗರ ಉತ್ತರದ ಕಾವೂರು ವಾರ್ಡ್ 18ರಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ. ವೈ.ಭರತ್ ಶೆಟ್ಟಿ ಸೋಮವಾರ ಶಿಲಾನ್ಯಾಸ ನೆರವೇರಿಸಿದರು.
1 ಕೋ. ರೂ. ವೆಚ್ಚದ ವಾರ್ಡ್ 18 ಕಾವೂರು ವ್ಯಾಪ್ತಿಯ ಅಕಾಶಭವನ ಮುಖ್ಯ ಕಾಂಕ್ರಿಟ್ ರಸ್ತೆ ವಿಸ್ತರಣೆ ಕಾಮಗಾರಿ, 2.20 ಲಕ್ಷ ರೂ. ವೆಚ್ಚದಲ್ಲಿ ಆಕಾಶಭವನ ಲಾಸ್ಟ್ ಸ್ಟಾಪ್ ನವೀನ್ ಅವರ ಮನೆಯ ಬಳಿ ನೂತನ ಚರಂಡಿ ಮತ್ತು ರಸ್ತೆ ಕಾಮಗಾರಿ, 3 ಲಕ್ಷ ರೂ. ವೆಚ್ವದಲ್ಲಿ ಕಾವೂರು ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಮರುಳು ಧೂಮಾವತಿ ದೈವಸ್ಥಾನದ ಭಂಡಾರ ಮನೆಯ ಬಳಿಯ ಮೆಟ್ಟಿಲು ವಿಸ್ತರಣೆ ಕಾಮಗಾರಿಗಳಿಗೆ ಶಾಸಕರು ಶಿಲಾನ್ಯಾಸ ನೆರವೆರಿಸಿದರು.
ಈ ಸಂದರ್ಭ ಸ್ಥಳೀಯ ಮನಪಾ ಸದಸ್ಯೆ ಗಾಯತ್ರಿ ಎ. ರಾವ್, ವಾರ್ಡ್ ನ ಮಂಡಲ ಪ್ರಮುಖರು, ಮೋರ್ಚಾ, ಪ್ರಕೋಷ್ಠ ಪ್ರಮುಖರು, ಮಹಾಶಕ್ತಿ ಕೇಂದ್ರದ ಪ್ರಮುಖರು, ಶಕ್ತಿ ಕೇಂದ್ರದ ಪ್ರಮುಖರು, ಬೂತ್ ಅಧ್ಯಕ್ಷರು, ಕಾರ್ಯದರ್ಶಿಗಳು, ಬಿಜೆಪಿ ಕಾರ್ಯಕರ್ತರು ಮತ್ತು ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.
Next Story