ಫರಂಗಿಪೇಟೆ ಜುಮಾ ಮಸೀದಿಯಲ್ಲಿ ಸಂಭ್ರಮದ ಈದುಲ್ ಫಿತ್ರ್ ಆಚರಣೆ
ಬಂಟ್ವಾಳ, ಮೇ 3: ಅಲ್ಲಾಹನ ಅಪಾರವಾದ ಅನುಗ್ರಹದಿಂದ ನಮಗೆ ಮತ್ತೊಂದು ಪರಿಶುದ್ಧ ಈದುಲ್ ಫಿತ್ರ್ ಆಚರಿಸಲು ಅವಕಾಶ ಲಭಿಸಿದ್ದು, ಎಲ್ಲರೂ ಹಬ್ಬವನ್ನು ಧರ್ಮ ಸಮ್ಮತಿಯಂತೆ ಸಂಭ್ರಮದಿಂದ ಆಚರಿಸಬೇಕು ಎಂದು ಮುಹಿಯುದ್ದೀನ್ ಜುಮಾ ಮಸೀದಿ ಫರಂಗಿಪೇಟೆ ಇದರ ಖತೀಬ್ ಅಬ್ಬಾಸ್ ದಾರಿಮಿ ಹೇಳಿದರು.
ಫರಂಗಿಪೇಟೆ ಜುಮಾ ಮಸೀದಿಯಲ್ಲಿ ಈದುಲ್ ಫಿತ್ರ್ ಆಚರಣೆ ಬಳಿಕ ಮಾತನಾಡಿದ ಅವರು, ಎಲ್ಲರಿಗೂ ಹಬ್ಬದ ಶುಭಾಶಯಗಳು. ಯಾರೂ ಅನಾಚಾರಿಕ ಮತ್ತು ಧರ್ಮ ಸಮ್ಮತಿಯಲ್ಲದ ರೀತಿಯಲ್ಲಿ ಹಬ್ಬವನ್ನು ಆಚರಿಸಬಾರದು. ಒಂದು ತಿಂಗಳು ರಮಾಝಾನ್ ತಿಂಗಳಲ್ಲಿ ಮಾಡಿದ ಒಳಿತಿಗೆ ಕೇಡು ಬಾರದಂತೆ ಮುಂದೆಯೂ ಬದುಕಬೇಕು. ಸರ್ವರಿಗೂ ಅಲ್ಲಾಹನು ಶಾಂತಿ, ನೆಮ್ಮದಿ, ಸಹಬಾಳ್ವೆಯನ್ನು ಕರುಣಿಸಲಿ ಎಂದರು.
ಈ ಸಂದರ್ಭದಲ್ಲಿ ಜುಮಾ ಮಸೀದಿಯ ಅಧ್ಯಕ್ಷ ಉಮರ್ ಫಾರೂಕ್ ಫರಂಗಿಪೇಟೆ, ಉಪಾಧ್ಯಕ್ಷ ಟಿ..ಕೆ.ಬಶೀರ್, ಪ್ರಧಾನ ಕಾರ್ಯದರ್ಶಿ ಯೂಸುಫ್ ಅಲಂಕಾರ್, ಕಾರ್ಯದರ್ಶಿ ಅಬೂಬಕ್ಕರ್, ಕೋಶಾಧಿಕಾರಿ ಮಜೀದ್ ಫರಂಗಿಪೇಟೆ, ಪ್ರಮುಖರಾದ ಅಲ್ತಾಫ್ ಡೈಮಂಡ್, ಮುಸ್ತಫಾ ಮೇಲ್ಮನೆ, ಖಾದರ್ ಪಾವೂರ್, ರಶೀದ್, ಇಸ್ಮಾಯಿಲ್ ಪಾವೂರ್, ಉಮರಬ್ಬ, ಅಶ್ವದ್, ಅನ್ವರ್, ಅಬೂಸಾಲಿ ಫರಂಗಿಪೇಟೆ ಹಾಗೂ ಇತರರು ಉಪಸ್ಥಿತರಿದ್ದರು.