ಬಿಜೆಪಿಯ ಬುಲ್ಡೋಝರ್ ನಿಂದ ದಿಲ್ಲಿಯಲ್ಲಿ 63 ಲಕ್ಷ ಜನರ ಮನೆ ಅಥವಾ ಅಂಗಡಿ ನೆಲಸಮವಾಗಬಹುದು: ಕೇಜ್ರಿವಾಲ್
ಹೊಸದಿಲ್ಲಿ: ದಿಲ್ಲಿಯಲ್ಲಿ ಜನರ ಅಂಗಡಿಗಳು ಹಾಗೂ ಮನೆಗಳನ್ನು ಬಿಜೆಪಿ ಬುಲ್ಡೋಝರ್ ಮಾಡುತ್ತಿರುವ ರೀತಿ ಸರಿಯಲ್ಲ. ಇದು ಸ್ವತಂತ್ರ ಭಾರತದ ಅತಿದೊಡ್ಡ ವಿನಾಶ ಎಂದು ಕರೆದ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ , 63 ಲಕ್ಷ ಜನರಮನೆ ಅಥವಾ ಅಂಗಡಿ ನೆಲಸಮ ವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ದಿಲ್ಲಿ ಸಿಎಂ, "ದಿಲ್ಲಿಯಲ್ಲಿ ಅತಿಕ್ರಮಣದ ವಿರುದ್ಧ ಎಂಸಿಡಿ ಬುಲ್ಡೋಝರ್ಗಳನ್ನು ಓಡಿಸುತ್ತಿದೆ. ಆದರೆ 2 ವಿಷಯಗಳು ಮುಖ್ಯವಾಗಿವೆ. ಒಂದು, ದಿಲ್ಲಿಯ 80 ಶೇ. ಅತಿಕ್ರಮಣಕ್ಕೆ ಒಳಪಡುತ್ತದೆ. ಎರಡನೆಯದಾಗಿ ಜನರು ತಮ್ಮ ಕಾಗದಪತ್ರಗಳನ್ನು ತೋರಿಸಿದ ನಂತರವೂ ಬುಲ್ಡೋಝರ್ಗಳನ್ನು ಓಡಿಸಲಾಗುತ್ತಿದೆ. ಇದು ಸರಿಯಲ್ಲ. ದಿಲ್ಲಿಯ ಗುಡಿಸಲು ಮತ್ತು ಕೊಳೆಗೇರಿಗಳನ್ನು ಒಡೆಯಲು ಬಿಜೆಪಿಯವರು ಯೋಜಿಸುತ್ತಿದ್ದಾರೆ'' ಎಂದು ಅರವಿಂದ ಕೇಜ್ರಿವಾಲ್ ಹೇಳಿದರು.
Next Story